For the best experience, open
https://m.bcsuddi.com
on your mobile browser.
Advertisement

ಟ್ಯಾಂಕರ್ ಕಾರ್ ಮಧ್ಯೆ ಭೀಕರ ಅಪಘಾತ - ಕಾರಿನಲ್ಲಿದ್ದ ಐವರ ದುರ್ಮರಣ

12:18 PM Nov 17, 2023 IST | Bcsuddi
ಟ್ಯಾಂಕರ್ ಕಾರ್ ಮಧ್ಯೆ ಭೀಕರ ಅಪಘಾತ   ಕಾರಿನಲ್ಲಿದ್ದ ಐವರ ದುರ್ಮರಣ
Advertisement

ಚೆನ್ನೈ: ತಮಿಳುನಾಡಿನ ತಿರುಪುರ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ. ಧಾರಾಪುರಂ ಬಳಿಯ ಮನಕಡೌ ಗ್ರಾಮದ ಸಮೀಪ ಟ್ಯಾಂಕರ್‌ ಟ್ರಕ್‌ ಹಾಗೂ ಕಾರು ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಅಪಘಾತದ ತೀವ್ರತೆಗೆ ತಮಿಳ್‌ಮಣಿ (51), ಚಿತ್ರಾ (49), ಸೆಲ್ವರಾಣಿ (70) ಹಾಗೂ ಬಾಲಕೃಷ್ಣ (78) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಧಾರಾಪುರಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕಲಾರಾಣಿ (50) ಅವರು ಮೃತಪಟ್ಟಿದ್ದಾರೆ. ಐವರು ದಿಂಡಿಗಲ್‌ ಜಿಲ್ಲೆಯ ಪಳನಿ ಗ್ರಾಮಕ್ಕೆ ಕಾರಿನಲ್ಲಿ ಮದುವೆಗೆಂದು ಹೊರಟಿದ್ದರು. ಇದೇ ವೇಳೆ, ಧಾರಾಪುರಂ-ಪಳನಿ ರಸ್ತೆಯಲ್ಲಿ ಟ್ಯಾಂಕರ್ ಡಿಕ್ಕಿಯಾಗಿದೆ. ಅಪಘಾತದಲ್ಲಿ ಮೃತಪಟ್ಟವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Author Image

Advertisement