For the best experience, open
https://m.bcsuddi.com
on your mobile browser.
Advertisement

ಟಿಪ್ಪು ಜಯಂತಿ ಹಿನ್ನೆಲೆ: ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ.!

07:41 AM Nov 10, 2023 IST | Bcsuddi
ಟಿಪ್ಪು ಜಯಂತಿ ಹಿನ್ನೆಲೆ  ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ
Advertisement

ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇಂದು ಜಾರಿ ಟಿಪ್ಪು ಜಯಂತಿ ಆಚರಣೆಗೆ ಚಿಂತನೆ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಆದೇಶ ಹೊರಡಿಸಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಆಚರಣೆ ಸಾಧ್ಯತೆ ಎನ್ನಲಾಗುತ್ತಿದ್ದು, ಮೈಸೂರು ಸೇರದಿಂತೆ ಹಲವಡೆಯಿಂದ ಜನರು ಆಗಮಿಸುವ ಸಾಧ್ಯತೆ ಇದೆ ಎಂದು ಮುಂಜಾಗ್ರತ ಕ್ರಮವಾಗಿ ನಿಷೇಧಾಗ್ನೇ ಜಾರಿಗೊಳಿಸಿ ಎಂದು ಆದೇಶಿಸಲಾಗಿದೆ. ಇಂದು ಬೆಳಗ್ಗೆ 6 ರಿಂದ ರಾತ್ರಿ 11:00 ವರೆಗೆ ನಿಷೇಧಾಜ್ಞೆ ಜಾರಿ ಇರಲಿದೆ.

Advertisement

ಯಾವುದೇ ರೀತಿಯಾದಂತಹ ಮೆರವಣಿಗೆ, ಪ್ರತಿಭಟನೆ, ನಡೆಸಿದಂತೆ ನಿರ್ಬಂಧಿಸಲಾಗಿದೆ. ಅಲ್ಲದೆ ಘೋಷಣೆ ಕೂಗದಂತೆ, ಪ್ರಚೋದನಕಾರಿ ಇರುವಂತ ಚಿತ್ರವಿರುವ ಟಿ-ಶರ್ಟ್ ಗಳನ್ನು ನಿಷೇಧ ಗೊಳಿಸಿದ್ದು, ಬ್ಯಾನರ್, ಬಂಟಿಂಗ್ಸ್ ಧ್ವನಿವರ್ಧಕ ಹಾಗೂ ಪಟಾಕಿ ಬಳಕೆಗೆ ನಿರ್ಬಂಧಿಸಿ ನಿಷೇಧಾಜ್ಞೆ ಜಾರಿಗೊಳಿಸಿ ಎಂದು ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ಆದೇಶ ಹೊರಡಿಸಿದ್ದಾರೆ.

Author Image

Advertisement