For the best experience, open
https://m.bcsuddi.com
on your mobile browser.
Advertisement

ಜೈಲಿನಿಂದ ಮುರುಘಾ ಶರಣರು ಹೊರ ಬಂದ್ರು .! ಜೈಲರ್ ವಿರುದ್ಧ ತನಿಖೆಗೆ ಆದೇಶ.!

07:42 AM Nov 19, 2023 IST | Bcsuddi
ಜೈಲಿನಿಂದ ಮುರುಘಾ ಶರಣರು ಹೊರ ಬಂದ್ರು    ಜೈಲರ್ ವಿರುದ್ಧ ತನಿಖೆಗೆ ಆದೇಶ
Advertisement

ಚಿತ್ರದುರ್ಗ: ಮುರುಘಾಶ್ರೀ ಬಿಡುಗಡೆ ಹಿನ್ನೆಲೆ ಚಿತ್ರದುರ್ಗ ಕಾರಾಗೃಹ ಇಲಾಖೆಯ ಎಡಿಜಿಪಿ ಅವರಿಗೆ ತನಿಖೆ ನಡೆಸಲು ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

ಇನ್ನು ಈ ಘಟನೆಗೆ ಸಂಬಂಧಪಟ್ಟಂತೆ ಜಿಲ್ಲಾ ಕಾರಾಗೃಹದ ಜೈಲರ್ ಆಗಿರುವ ಶ್ರೀಮಂತ್ ಗೌಡ ಪಾಟೀಲ್ ವಿರುದ್ಧ ತನಿಖೆಗೆ ಆದೇಶಿಸಿದೆ.

Advertisement

ಚಿತ್ರದುರ್ಗದ ಮುರುಘಾಶ್ರೀ ವಿರುದ್ಧದ 1ನೇ ಫೋಕ್ಸೋ ಕೇಸ್ನಲ್ಲಿ ಜಾಮೀನು ಹಿನ್ನಲೆ ಹೈಕೋರ್ಟ್ ಆದೇಶದನ್ವಯ ಬಿಡುಗಡೆಗೆ ಸೂಚನೆ ನೀಡಿತ್ತು.

ಆದರೆ, 2ನೇ ಫೋಕ್ಸೋ ಪ್ರಕರಣದಲ್ಲಿ ಬಾಡಿ ವಾರೆಂಟ್ ಹಿನ್ನೆಲೆ ಬಂಧನ ವಾರೆಂಟ್ಗೆ ಸರ್ಕಾರಿ ವಕೀಲ ಜಗದೀಶ್ ಮನವಿ ಮಾಡಿದ್ದರು. ಇದಾದ ಬಳಿಕ ವಿಸಿ ಮೂಲಕ ಕೋರ್ಟ್ಗೆ ಹಾಜರು ಪಡಿಸಲು ನ್ಯಾಯಾಲಯ ಸೂಚಿಸಿತ್ತು. 1ನೇ ಕೇಸಲ್ಲಿ ಬಿಡುಗಡೆ ಆದೇಶ, 2ನೇ ಕೇಸಲ್ಲಿ ಬಾಡಿ ವಾರೆಂಟ್ ಬಗ್ಗೆಯೂ ಸೂಚನೆ ನೀಡಿತ್ತು. ಹಾಗಾಗಿ ಜಿಲ್ಲಾ ಕಾರಾಗೃಹದ ಜೈಲರ್ ಆಗಿರುವ ಶ್ರೀಮಂತ್ ಗೌಡ ಪಾಟೀಲ್ ವಿರುದ್ಧ ತನಿಖೆಗೆ ಆದೇಶಿಸಿದೆ.

Tags :
Author Image

Advertisement