ಜೈಲಿನಲ್ಲಿ ದಾಳಿಗೆ ಪೊಲೀಸರ ಮಾಸ್ಟರ್ ಪ್ಲಾನ್ - ಜೈಲು ಅಧಿಕಾರಿಗೆ ಶಾಕ್, ಮೊಬೈಲ್ ಸಿಕ್ಕಿದ್ದು ಇದೆ ಕಾರಣಕ್ಕೆ
12:29 PM Sep 15, 2024 IST
|
BC Suddi
Advertisement
ಬೆಂಗಳೂರು: ಕೇಂದ್ರ ಕಾರಾಗೃಹದ ಜೈಲಿನಲ್ಲಿ ಪ್ರತಿ ಬಾರಿ ದಾಳಿ ನಡೆಸುತ್ತಾ ಪೊಲೀಸರು ಬರಿಗೈಲಿ ವಾಪಸ್ ಆಗ್ತಿದ್ರು. ಅದರಲ್ಲೂ ನಾಗನ ಸೆಲ್ನಲ್ಲಿ ಏನೂ ಸಿಗುತ್ತಿರಲಿಲ್ಲ. ಆದ್ರೆ ನಿನ್ನೆ ಸೌಥ್ ಈಸ್ಟ್ ಪೊಲೀಸರು ಮಾಡಿದ ಪ್ಲಾನ್ಗೆ ನಾಗ ಸೇರೆ ಜೈಲು ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಈ ಹಿಂದೆ ದಾಖಲಾಗಿದ್ದ ಕೇಸ್ ಸಂಬಂಧ ಮಹಜರ್ ನಡೆಸಬೇಕು ಎಂದು ಜೈಲಿಗೆ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ.
Advertisement
ದಾಳಿ ಅಂತ ಹೇಳಿದ್ರೆ ಜೈಲಿನೊಳಗೆ ಬಿಡಲು ತಡ ಮಾಡ್ತಾರೆ. ಒಳಗೆ ಮೊಬೈಲ್ಗಳನ್ನು ಅಡಗಿಸಿ ಇಡ್ತಾರೆ ಅಂತ ಮಹಜರ್ ನೆಪ ಹೇಳಿ ಎಂಟ್ರಿಕೊಟ್ಟ ಪೊಲೀಸರು ಸೀದಾ ನಾಗ ಸೆಲ್ಗೆ ನುಗ್ಗಿ ಮೊಬೈಲ್ ಸೀಜ್ ಮಾಡಿದ್ದಾರೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ
Next Article