For the best experience, open
https://m.bcsuddi.com
on your mobile browser.
Advertisement

ಜೆಡಿಎಸ್ ಬಿಜೆಪಿ ಒಂದು ದಿನ ಬೇರೆ ಬೇರೆ ಆಗುತ್ತಾರೆ ಜಿ.ಪರಮೇಶ್ವರ್ ಭವಿಷ್ಯ.!

08:19 AM Jul 31, 2024 IST | BC Suddi
ಜೆಡಿಎಸ್ ಬಿಜೆಪಿ ಒಂದು ದಿನ ಬೇರೆ ಬೇರೆ ಆಗುತ್ತಾರೆ ಜಿ ಪರಮೇಶ್ವರ್ ಭವಿಷ್ಯ
Advertisement

ಹುಬ್ಬಳ್ಳಿ: ಬಿಜೆಪಿ– ಜೆಡಿಎಸ್ ಒಂದಿಲ್ಲ ಒಂದು ದಿನ ಬೇರೆ ಬೇರೆ ಆಗುತ್ತಾರೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬೇರೆ ಬೇರೆ ಆಗಬೇಕಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಎರಡೂ ಪಕ್ಷದವರು ಸ್ವಲ್ಪದಿನ ಒಟ್ಟಿಗೆ ಇರಬಹುದು. ಆ ನಂತರ ಬೇರೆ ಆಗುತ್ತಾರೆ. ಜೆಡಿಎಸ್ನವರು ಹಿಂದೆ ನಮ್ಮ ಜೊತೆ ಸೇರಿದ್ದರು. ಸರ್ಕಾರವನ್ನೂ ರಚಿಸಿದ್ದರು. ಕೆಲದಿನಗಳ ನಂತರ ನಮ್ಮನ್ನು ಬಿಟ್ಟುಹೋದರು. ಅದೇ ರೀತಿ ಈ ಸಲವೂ ಆಗುತ್ತದೆ ಎಂದು ಹೇಳಿದರು.

Advertisement

ಮುಡಾ ಪ್ರಕರಣದಲ್ಲಿ ಕಾನೂನು ಬಾಹಿರವಾಗಿ ಏನೂ ನಡೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ, ಜೆಡಿಎಸ್ನ ಕೆಲವರಿಗೆ ಅರ್ಥವಾಗಿದೆ. ಆದರೆ, ಕೆಲವರಿಗೆ ಅರ್ಥವಾಗಿಲ್ಲ. ಪ್ರತಿಭಟನೆ ನಡೆಸಿದ್ದಾರೆ ಎಂದರು.

Tags :
Author Image

Advertisement