ಜೂನ್ 1ರ “ಇಂಡಿಯಾ ಮೈತ್ರಿಕೂಟ" ಸಭೆಗೆ ನಾನು ಹೋಗೋದಿಲ್ಲ ಎಂದ ಮಮತಾ ಬ್ಯಾನರ್ಜಿ
10:24 AM May 28, 2024 IST
|
Bcsuddi
Advertisement
ನವದೆಹಲಿ: ಜೂನ್ 1ರಂದು ನಡೆಯುವ “ಇಂಡಿಯಾ ಮೈತ್ರಿಕೂಟ" ಸಭೆಗೆ ನಾನು ಹೋಗುತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ ಒಂದೇ ದಿನ 10 ಸ್ಥಾನಗಳಿಗೆ ಚುನಾವಣೆ ಇರುವುದರಿಂದ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಪಂಜಾಬ್, ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಜೂನ್ 1 ರಂದು ಚುನಾವಣೆ ನಡೆಯಲಿದೆ.
Advertisement
ಒಂದು ಕಡೆ ಚಂಡಮಾರುತ, ಇನ್ನೊಂದು ಕಡೆ ಚುನಾವಣೆ ಈ ಎರಡನ್ನೂ ಎದುರಿಸಬೇಕಿದೆ. ಚಂಡಮಾರುತ ಪರಿಹಾರವು ನನ್ನ ಸದ್ಯದ ಆದ್ಯತೆಯಾಗಿದೆ ಎಂದು ಮಮತಾ ಹೇಳಿದ್ದಾರೆ. ಕಳೆದ ವರ್ಷ ಜೂನ್ 23 ರಂದು ಪಾಟ್ನಾದಲ್ಲಿ ಮೊದಲ ಸಭೆ ನಡೆದರೆ, ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ ಎರಡನೇ ಸಭೆ ನಡೆಯಿತು. ಮೂರನೇ ಸಭೆ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ನಡೆಯಿತು.
Next Article