ಜಾತ್ರೆ ಪ್ರಸಾದ ಸೇವಿಸಿ ಮೂವರ ದುರ್ಮರಣ
12:05 PM Aug 27, 2024 IST | BC Suddi
Advertisement
ತುಮಕೂರು : ಜಾತ್ರೆಗಾಗಿ ಮಾಡಿದ್ದ ಊಟ ಸೇವನೆಯಿಂದ ವಾಂತಿಭೇದಿಯಾಗಿ ಮೂವರು ಮಹಿಳೆಯರು ಮೃತಪಟ್ಟಿರುವ ಘಟನೆ ಮಧುಗಿರಿ ತಾಲ್ಲೂಕು ಬುಳ್ಳಸಂದ್ರ ಗ್ರಾಮದಲ್ಲಿ ನಡೆದಿದೆ. ಶನಿವಾರ ಗ್ರಾಮದಲ್ಲಿ ಮುತ್ತು ರಾಯಸ್ವಾಮಿ,ಕರಿಯಮ್ಮ ದೇವಿಗೆ ಹರಿಸೇವೆ ಮಾಡಲಾಗಿತ್ತು. ಊಟ ಮಾಡಿದ ಬಳಿಕ ಗ್ರಾಮದಲ್ಲಿ ಕೆಲವರಿಗೆ ವಾಂತಿಭೇದಿ ಕಾಣಿಸಿಕೊಂಡಿದೆ. ಶನಿವಾರ ಬುಳ್ಳುಸಂದ್ರ ಗ್ರಾಮದಲ್ಲಿ ತಿಮ್ಮಕ್ಕ(85) ಸಾವನ್ನಪ್ಪಿದ್ದು, ಬಳಿಕ ಭಾನುವಾರ ಗಿರಿಯಮ್ಮ(90), ಕಾಟಮ್ಮ(45) ಮೃತಪಟ್ಟಿದ್ದಾರೆ. ತಿಮ್ಮಕ್ಕ ಹಾಗೂ ಗಿರಿಯಮ್ಮ ಈ ಇಬ್ಬರು ವಯೋಸಹಜ ಕಾಯಿಲೆಯಿಂದ ಸಾವನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆಯಾದರೂ ಈ ಇಬ್ಬರ ಸಾವಿನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದೆ. ಅಸ್ವಸ್ಥಗೊಂಡವರಿಗೆ ಮಧುಗಿರಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಮುಂದುವರೆದಿದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.
Advertisement