ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಜಮೀನಿನಲ್ಲಿ ವಿದ್ಯುತ್ ಸ್ಪರ್ಶಿಸಿ ರೈತ ಸಾವು..!

02:47 PM Apr 05, 2024 IST | Bcsuddi
Advertisement

ಜಮೀನಿನಲ್ಲಿ ವಿದ್ಯುತ್ ವೈಯರ್ ತಗುಲಿ ರೈತ ಸ್ಥಳದಲ್ಲಿ ಮೃತಪಟ್ಟ ಘಟನೆ ದೇವದುರ್ಗ ತಾಲೂಕಿನ ದೇವತಗಲ್ ನಡೆದಿದೆ. ಗ್ರಾಮದಲ್ಲಿ ಮೃತಪಟ್ಟ ರೈತ ಅಯ್ಯಪ್ಪ ನಾಯಕ (38) ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಬಿಡಲು ತೆರಳಿದ್ದಾಗ ಪಂಪ್‌ಸೆಟ್ನಿಂದ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಈ ಅನಾಹುತ ಸಂಭವಿಸಿದೆ. ರೈತ ಅಯ್ಯಪ್ಪ ನಾಯಕ ತನ್ನ ಮೂರು ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದ್ದ. ಜೆಸ್ಕಾಂ ಬೆಳಗ್ಗೆ 4 ರಿಂದ ಕೇವಲ 5 ತಾಸು ತ್ರಿಪೇಸ್ ವಿದ್ಯುತ್ ನೀಡುತ್ತಿದ್ದು, ಬೆಳೆಗ್ಗೆ ನೀರು ಕಟ್ಟಲು ಬೆಳಂಬೆಳಗ್ಗೆ ಜಮೀನಿಗೆ ತೆರಳಿದ್ದಾಗ ಘಟನೆ ನಡೆದಿದೆ. ಸ್ಥಳಕ್ಕೆ ವೈದ್ಯಾಧಿಕಾರಿ ಡಾ.ರಾಜ್‌ಕುಮಾರ ಹುಲಿಮನಿಗೌಡ, ಪಿಎಸ್‌ಐ ಬಸವರಾಜ ನಾಯಕ ಭೇಟಿನೀಡಿ ಪರಿಶೀಲಿಸಿದರು. ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Advertisement
Next Article