For the best experience, open
https://m.bcsuddi.com
on your mobile browser.
Advertisement

'ಜನರ ತೀರ್ಮಾನವೇ ಅಂತಿಮ ಅವರ ತೀರ್ಪಿಗೆ ತಲೆಬಾಗುತ್ತೇನೆ '- ಸೋಲಿನ ಬಳಿ ಡಿ.ಕೆ ಸುರೇಶ್ ಹೇಳಿಕೆ

03:08 PM Jun 04, 2024 IST | Bcsuddi
 ಜನರ ತೀರ್ಮಾನವೇ ಅಂತಿಮ ಅವರ ತೀರ್ಪಿಗೆ ತಲೆಬಾಗುತ್ತೇನೆ    ಸೋಲಿನ ಬಳಿ ಡಿ ಕೆ ಸುರೇಶ್ ಹೇಳಿಕೆ
Advertisement

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ. ಎನ್. ಮಂಜುನಾಥ್ ಅವರ ವಿರುದ್ಧ ಸೋಲುಂಡ ಡಿ,ಕೆ ಸುರೇಶ್‌ಗೆ ತ್ರೀವ ಮುಖಭಂಗವಾಗಿದೆ.

ಫಲಿತಾಂಶದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಡಿ.ಕೆ ಸುರೇಶ್‌, ಜನರ ತೀರ್ಮಾನವೇ ಅಂತಿಮ ಅವರ ತೀರ್ಪಿಗೆ ತಲೆಬಾಗುತ್ತೇನೆ ಎಂದು ಹೇಳಿದ್ದಾರೆ.ಈ ಸಂದರ್ಭದಲ್ಲಿ ಕಾರ್ಯಕರ್ತ ರಿಗೆ, ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ. ಚುನಾವಣೆನಲ್ಲಿ ಮತದಾರರ ತೀರ್ಮಾನ ಸ್ವಾಗತ ಮಾಡಿ ಡಾ. ಮಂಜುನಾಥ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ನನಗೆ ಪಕ್ಷ ಅವಕಾಶ ಕೊಟ್ಟಿತ್ತು. ನಮ್ಮ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮುಖ್ಯಮಂತ್ರಿಗಳಾ ದ ಸಿದ್ದರಾಮಯ್ಯ ಸೇರಿ ಎಲ್ಲ ನಾಯಕರುಗಳಿಗೆ ವಿಶೇಷ ಧನ್ಯವಾದ ಸಲ್ಲಿಸಿ ತಲೆಬಾಗುತ್ತೇನೆ ಎಂದರು

Advertisement

ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದೇ ನೆ. ಹೊಸ ನಾಯಕತ್ವಕ್ಕೆ ಅವಕಾಶ ನೀಡಿದ್ದಾರೆ. ರಾಜಕೀಯ ಅಂತ್ಯವಾಗಿಲ್ಲ. ಸಾಮಾನ್ಯ ಪ್ರಜೆಯಾಗಿ , ಕಾರ್ಯಕರ್ತನಾಗಿ ಇರುತ್ತೇನೆ. ನಿಮ್ಮೊಂ ದಿಗೆ ಇರುತ್ತೇ ನೆ.ಯಾರೂ ಧೃತಿ ಗೆಡುವ ಅಗತ್ಯವಿಲ್ಲ ಎಂದರು.

100 % ಗೆಲ್ಲುವ ನಿರೀಕ್ಷೆ ಇತ್ತು. ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲ ಕೊಡುತ್ತಾರೆ ಎನ್ನುವ ವಿಶ್ವಾಸ ಇತ್ತು. ಜನರ ತೀ ರ್ಮಾನವೇ ಅಂತಿಮ ಎಂದರು.

Author Image

Advertisement