ಜನರಿಗೆ ನಾಟಕ ಬೇಕಿಲ್ಲ, ಸುಸ್ಥಿರತೆ ಬೇಕು - ಮೋದಿ
05:11 PM Jun 24, 2024 IST | Bcsuddi
Advertisement
ನವದೆಹಲಿ: ದೇಶದ ಜನರಿಗೆ ಬೇಕಾಗಿರುವುದು ಘೋಷಣೆಗಳಲ್ಲ, ನಾಟಕವಲ್ಲ, ಬದಲಾಗಿ ಅವರಿಗೆ ಸುಸ್ಥಿರತೆ ಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಜನತೆ ಪ್ರತಿಪಕ್ಷಗಳಿಂದ ಉತ್ತಮ ನಡೆಯನ್ನು ನಿರೀಕ್ಷಿಸುತ್ತಾರೆ. ಪ್ರಜಾಪ್ರಭುತ್ವದ ಘನತೆಯನ್ನ ಕಾಪಾಡುವ ನಿಟ್ಟಿನಲ್ಲಿ ಪ್ರತಿಪಕ್ಷಗಳು ಕೆಲಸ ಮಾಡಬೇಕು. 18ನೇ ಲೋಕಸಭೆಗೆ ಆಯ್ಕೆಯಾಗಿರುವ ಸಂಸದರು ಜನರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಮೋದಿ ಹೇಳಿದ್ದಾರೆ.