ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಜಗಳ ಬಿಡಿಸಲು ಬಂದ ಪೊಲೀಸರ112 ವಾಹನವನ್ನೇ ಚಲಾಯಿಸಿಕೊಂಡು ಪರಾರಿಯಾದ ಕಿಡಿಗೇಡಿ

01:48 PM Nov 21, 2023 IST | Bcsuddi
Advertisement

ತುಮಕೂರು: ಜಗಳ ಬಗೆಹರಿಸಲು ಬಂದ ಪೊಲೀಸರ 112 ಸಮೇತ ಪರಾರಿಯಾಗಲು ಯತ್ನಿಸಿದ ಕಿಡಿಗೇಡಿಯನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಹಿಡಿದ ಘಟನೆ ತುಮಕೂರು ಗುಬ್ಬಿ ತಾಲೂಕಿನ ನಾರಾನಹಳ್ಳಿಯಲ್ಲಿ ನಡೆದಿದೆ.

Advertisement

ನವೆಂಬರ್ 20 ರ ತಡರಾತ್ರಿ ಮುನಿಯ ಎಂಬಾತ ತನ್ನ ಅಣ್ಣನ ಜೊತೆ ಜಗಳ ಮಾಡಿದ್ದಾನೆ. ಆಗ ಮುನಿಯನ ಸಹೋದರ 112 ಸಂಖ್ಯೆಗೆ ಕರೆ ಮಾಡಿದ್ದು, ಅದರಂತೆ ಪೋಲಿಸರ 112 ವಾಹನ ಘಟನಾ ಸ್ಥಳಕ್ಕೆ ಬಂದಿದೆ.

ಈ ವೇಳೆ ಮುನಿಯ 112 ವಾಹನದ ಹಿಂಬದಿಗೆ ಕಲ್ಲಿನಿಂದ ಹೊಡೆದಿದ್ದು, ಅದನ್ನು ಚಾಲಕ ಏನಾಯ್ತು ಎಂದು ವಾಹನ ಹಿಂಬದಿಗೆ ನೋಡಲು ಹೋಗಿದ್ದಾನೆ. ಆಗ ಮುನಿಯ ಪೊಲೀಸರ 122​ ವಾಹನ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.

ಬಳಿಕ ಪೊಲೀಸರು ಸತತ 3 ಗಂಟೆಗಳ ಕಾಲ ವಾಹನಕ್ಕಾಗಿ ಕಾರ್ಯಚರಣೆ ನಡೆಸಿದ್ದಾರೆ. ಕೊನೆಗೆ ತುಮಕೂರು ತಾಲೂಕಿನ ಹೆಬ್ಬೂರು ಬಳಿ ವಾಹನ ಪತ್ತೆಯಾಗಿದ್ದು, ಸದ್ಯ ಆರೋಪಿ ಮುನಿಯನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement
Next Article