ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ಜಗತ್ತಿನಲ್ಲಿ ದರೋಡೆಕೋರರು,ಲೂಟಿಕೋರರು ಇದ್ದರೆ ಅದು ರಾಜಕಾರಣಿಗಳು'- ರಾಜು ಕಾಗೆ

03:23 PM Dec 27, 2023 IST | Bcsuddi
Advertisement

ಬೆಳಗಾವಿ: ರಾಜಕಾರಣ ಸಂಪೂರ್ಣ ಕೆಟ್ಟುಹೋಗಿದೆ. ಶಾಲಾ ಮಕ್ಕಳಿಗೆ ಸಮವಸ್ತ್ರ ಶೂ ಹಾಗೂ ಪುಸ್ತಕ ಕೊಡುವುದು ನಮ್ಮ ಕಮಿಷನ್ ಗಾಗಿ ಎಂದು ಶಾಸಕ ರಾಜು ಕಾಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ಖಾಸಗಿ ಶಾಲೆ ಬೀಳ್ಕೊಡುಗೆ ಸಮಾ ರಂಭದಲ್ಲಿ ಮಾತನಾಡಿದ ಅವರು, ನಮ್ಮ ಬಗ್ಗೆ ಹೇಳುತ್ತ ಹೋದರೆ ನಿಮಗೆ ನಮ್ಮ ಬಗೆಗೆ ಇರುವ ಗೌರವ ಉಳಿಯುವುದಿಲ್ಲ. ಜಗತ್ತಿನಲ್ಲಿ ದರೋಡೆಕೋರರು, ಲೂಟಿಕೋರರು ಇದ್ದರೆ ಅದು ರಾಜಕಾರಣಿಗಳು ಎಂದು ಟೀಕೆ ಮಾಡಿದರು.

ಈ ರೀತಿ ಹೇಳಿ ನಮ್ಮ ಮಾನವನ್ನು ನಾವೇ ತೆಗೆದುಕೊಂಡಂತಾಗುತ್ತದೆ. ಶ್ರೀ ಗಳ ಜೊತೆ ಗೌರವ ಕೊಟ್ಟು ನಮ್ಮನ್ನು ಕರೆದುಕೊಂಡು ಬರಬೇಡಿ. ನಮ್ಮನ್ನು ಹಿತ್ತಿಲ ಬಾಗಿಲಿನಿಂದ ಕರೆದುಕೊಂಡು ಬನ್ನಿ.ಅಷ್ಟರ ಮಟ್ಟಿಗೆ ರಾಜಕಾರಣ ಹದಗೆಟ್ಟು ಹೋಗಿದೆ. ನಾವೆಲ್ಲರೂ ಶುದ್ದರಿಲ್ಲ, ಪವಿತ್ರವಿಲ್ಲವೆಂದು ಹೇಳಿದ್ದಾರೆ.

Advertisement
Next Article