For the best experience, open
https://m.bcsuddi.com
on your mobile browser.
Advertisement

ಚಿತ್ರದುರ್ಗಕ್ಕೆ ನೂತನ ಎಸ್.ಪಿ ರಂಜಿತ್‌ ಕುಮಾ‌ರ್ ಬಂಡಾರು.!

08:05 AM Aug 18, 2024 IST | BC Suddi
ಚಿತ್ರದುರ್ಗಕ್ಕೆ ನೂತನ ಎಸ್ ಪಿ ರಂಜಿತ್‌ ಕುಮಾ‌ರ್ ಬಂಡಾರು
Advertisement

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಗೆ ನೂತನ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ರಂಜಿತ್‌ ಕುಮಾ‌ರ್ ಬಂಡಾರು ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ. ಈ ಹಿಂದೆ ಇದ್ದ ಧರ್ಮೇಂದ್ರ ಕುಮಾ‌ರ್ ಮೀನಾ ಅವರನ್ನು ಕಳೆದ ಜುಲೈ 3ರಂದು ವರ್ಗಾವಣೆ ಮಾಡಲಾಗಿತ್ತು.

ಇದೀಗ ಖಾಲಿಯಿದ್ದ ವರಿಷ್ಠಾಧಿಕಾರಿ ಸ್ಥಾನಕ್ಕೆ ರಂಜಿತ್‌ ಕುಮಾರ್ ಬಂಡಾರು ಅವರನ್ನು ವರ್ಗಾಯಿಸಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ನಾಗಪ್ಪ ಪರೀಟ್ ಅವರು ಆದೇಶಿಸಿದ್ದಾರೆ.

ರಂಜಿತ್ ಕುಮಾ‌ರ್ ಬಂಡಾರು ಅವರು ಹಿಂದೆ ಬಳ್ಳಾರಿ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಚಿತ್ರದುರ್ಗಕ್ಕೆ ಎಸ್‌ಪಿ ಆಗಿ ನೇಮಕಗೊಂಡಿದ್ದಾರೆ.

Advertisement

Tags :
Author Image

Advertisement