For the best experience, open
https://m.bcsuddi.com
on your mobile browser.
Advertisement

ಚಿಕ್ಕಮಗಳೂರು: ದಾಖಲೆಯಿಲ್ಲದೆ ಚಿನ್ನ ಸಾಗಾಟ KSRTC ಚಾಲಕ, ನಿರ್ವಾಹಕ ವಶಕ್ಕೆ

06:13 PM Mar 21, 2024 IST | Bcsuddi
ಚಿಕ್ಕಮಗಳೂರು  ದಾಖಲೆಯಿಲ್ಲದೆ ಚಿನ್ನ ಸಾಗಾಟ ksrtc ಚಾಲಕ  ನಿರ್ವಾಹಕ ವಶಕ್ಕೆ
Advertisement

ಚಿಕ್ಕಮಗಳೂರು: ಸರ್ಕಾರಿ ಬಸ್ಸು ಸೇರಿದಂತೆ ಇತರೆ ವಾಹನಗಳಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5.90 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು ನಿಂದ ಚಿಕ್ಕಮಗಳೂರಿಗೆ ಬಂದು ಅಲ್ಲಿಂದ ಕಡೂರಿಗೆ ತೆರಳುತ್ತಿದ್ದ KA:18:F:0824 ಬಸ್ಸಿನಲ್ಲಿ ಸಾಗಿಸುತ್ತಿದ್ದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಚಾಲಕ ಪ್ರಕಾಶ್ ಮತ್ತು ನಿರ್ವಾಹಕ ರಾಜೇಂದ್ರ ಮೂರ್ತಿ ಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಬಣಕಲ್ ವ್ಯಾಪ್ತಿಯ ಕೊಟ್ಟಿಗೆಹಾರ ಚೆಕ್ ಪೋಸ್ಟಿನಲ್ಲಿ ಒಂದು ಲಕ್ಷ ರೂ. ವಶಕ್ಕೆ ತೆಗೆದುಕೊಳ್ಳಲಾಗಿದೆ. ಮೂಡಿಗೆರೆ ತಾಲೂಕು ಗೋಣಿಬೀಡು ವ್ಯಾಪ್ತಿಯ ಚೆಕ್‌ಪೋಸ್ಟ್‌ನಲ್ಲಿ 3.62 ಲಕ್ಷ ರು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

Advertisement
Author Image

Advertisement