For the best experience, open
https://m.bcsuddi.com
on your mobile browser.
Advertisement

ಗಲೀಜು ಬಟ್ಟೆ ಹಾಕಿದ್ದ ಎಂದು ರೈತನಿಗೆ ಅಪಮಾನ; ಮೆಟ್ರೋ ಸಿಬ್ಬಂದಿ ವಜಾ!

01:34 PM Feb 26, 2024 IST | Bcsuddi
ಗಲೀಜು ಬಟ್ಟೆ ಹಾಕಿದ್ದ ಎಂದು ರೈತನಿಗೆ ಅಪಮಾನ  ಮೆಟ್ರೋ ಸಿಬ್ಬಂದಿ ವಜಾ
Advertisement

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ರೈತನಿಗೆ ಅಪಮಾನ ವಿಚಾರ ಸಂಬಂಧಿಸಿದಂತೆ ವರದಿಗೆ ಎಚ್ಚೆತ್ತುಕೊಂಡ BMRCL ಭದ್ರತಾ ಮೇಲ್ವಿಚಾರಕನನ್ನು ವಜಾ ಮಾಡಲಾಗಿದೆ.

ಬಟ್ಟೆ ಸ್ವಚ್ಛವಾಗಿಲ್ಲ ಎಂದು ವ್ಯಕ್ತಿಯೊಬ್ಬರಿಗೆ ಮೆಟ್ರೋ (Namma Metro) ಸಿಬ್ಬಂದಿ ನಿಲ್ದಾಣದ ಒಳಗೆ ಬಿಡಲು ನಿರಾಕರಿಸಿದ ಘಟನೆ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದ್ದು ಆ ನಂತರ ಈ ಕುರಿತು ವರದಿ ಮಾಡಿದ ಬಳಿಕ ಮೆಟ್ರೋ ಹಿರಿಯ ಅಧಿಕಾರಿ ಯಶವಂತ ಚವಾಣ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಮೆಟ್ರೋ ಒಳಗೆ ರೈತನನ್ನು ಬಿಡದ ಭದ್ರತಾ ಮೇಲ್ವಿಚಾರಕನನ್ನು ಕೂಡಲೇ ವಜಾಗೊಳಿಸಲಾಗಿದೆ. ಈ ಘಟನೆಯ ಕುರಿತು ತನಿಖೆ ನಡೆಸಲಾಗುವುದು ಎಂದು ಮೆಟ್ರೋ ಹಿರಿಯ ಅಧಿಕಾರಿ ಯಶವಂತ ಚವಾಣ್ ಭರವಸೆ ನೀಡಿದ್ದಾರೆ.

Author Image

Advertisement