ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಖ್ಯಾತ ಸಾಹಿತಿ ಬಿಎಲ್ ವೇಣು ಅವರ ಕಥೆ ಸುಡುಗಾಡು ಸಿದ್ಧನ ಪ್ರಸಂಗ: ದಾವಣಗೆರೆ ವಿವಿ ಬಿ.ಎ. ಪದವಿಯ ಪಠ್ಯ ಪುಸ್ತಕ ಸೇರ್ಪಡೆ!

07:39 AM Sep 01, 2024 IST | BC Suddi
Advertisement

 

Advertisement

ದಾವಣಗೆರೆ-ನಾಡಿನ ಖ್ಯಾತ ಕಥೆಗಾರರಾಗಿ ಕೀರ್ತಿಯನ್ನು ಸಂಪಾದಿಸಿರುವ ಡಾ.ಬಿ.ಎಲ್.ವೇಣು ಅವರ ಕಥೆಯೊಂದನ್ನು ದಾವಣಗೆರೆ ವಿಶ್ವವಿದ್ಯಾಲಯವು ಪ್ರಥಮ ಬಿ.ಎ. ಪದವಿಯ ಎರಡನೇ ಸೆಮಿಸ್ಟರ್‌ ಪಠ್ಯವೊಂದರಲ್ಲಿ ಸೇರ್ಪಡೆ ಆಗಲಿದೆ.?

2ನೇ ಸೆಮಿಸ್ಟ‌ರ್ ಗೆ ನಿಗದಿಪಡಿಸಿರುವ ಈ ಕಥಾ ಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳನ್ನು ಪಠ್ಯಪುಸ್ತಕ ಆಯ್ಕೆ ಸಮಿತಿ ಒಪ್ಪಿದ್ದು, ಇದರಲ್ಲಿ ವೇಣು ಅವರ ಕಥೆ ಸೇರ್ಪಡೆಯಾಗಿವೆ. ಈ ಪುಸ್ತಕವು ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಪದವಿ ಕಾಲೇಜುಗಳ ಪ್ರಥಮ ಬಿ.ಎ.ದ 2ನೇ ಸೆಮಿಸ್ಟರ್‌ನ 'ಸುಡುಗಾಡು ಸಿದ್ಧನ ಪ್ರಸಂಗ' ಹೆಸರಿನ ಈ ಕಥೆಯು 2001ರಲ್ಲಿ ರಾಜ್ಯ ಮಟ್ಟದ ದಿನ ಪತ್ರಿಕೆಯ ದೀಪಾವಳಿ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದಿತ್ತು ಎಂಬುದು ವಿಶೇಷ.!

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

 

Tags :
ಖ್ಯಾತ ಸಾಹಿತಿ ಬಿಎಲ್ ವೇಣು ಅವರ ಕಥೆ ಸುಡುಗಾಡು ಸಿದ್ಧನ ಪ್ರಸಂಗ: ದಾವಣಗೆರೆ ವಿವಿ ಬಿ.ಎ. ಪದವಿಯ ಪಠ್ಯ ಪುಸ್ತಕ.!
Advertisement
Next Article