ಕ್ಷಿಪ್ರ ಪ್ರಸಾದ ಮಹಾಗಣಪತಿ ದೇವಸ್ಥಾನದಲ್ಲಿ ಹನ್ನೊಂದನೆ ವಾರ್ಷಿಕೋತ್ಸವ
07:14 AM Jun 11, 2024 IST
|
Bcsuddi
Advertisement
Advertisement
ಚಿತ್ರದುರ್ಗ : ದವಳಗಿರಿ ಬಡಾವಣೆಯಲ್ಲಿರುವ ಕ್ಷಿಪ್ರ ಪ್ರಸಾದ ಮಹಾಗಣಪತಿ ದೇವಸ್ಥಾನದಲ್ಲಿ ಹನ್ನೊಂದನೆ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಸೋಮವಾರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕ್ಷಿಪ್ರ ಪ್ರಸಾದ ಮಹಾಗಣಪತಿಗೆ ಪಂಚಾಮೃತ ಸಹಿತ ರುದ್ರಾಭಿಷೇಕ, ನವಗ್ರಹ ಪುರಸ್ಸರ ಅಷ್ಟದ್ರವ್ಯ ಮಹಾಗಣಪತಿ ಹೋಮ, ಪೂರ್ಣಾಹುತಿ, ಅಲಂಕಾರ ನಂತರ ಮಹಾಮಂಗಳರಾತಿ ನಡೆಯಿತು. ಸಂಜೆ ದವಳಗಿರಿ ಬಡಾವಣೆ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನೆರವೇರಿತು.
ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಭದ್ರಿನಾಥ್, ಶ್ರೀನಿವಾಸ್, ಗುರುಮೂರ್ತಿ, ಚನ್ನಕೇಶವುಲು ಸೇರಿದಂತೆ ಸಾವಿರಾರು ಭಕ್ತರು ಸೇರಿದ್ದರು.
Next Article