For the best experience, open
https://m.bcsuddi.com
on your mobile browser.
Advertisement

-----ಕೋಲ ಶಾಂತಯ್ಯ ಅವರ ವಚನ ……

07:02 AM Apr 08, 2024 IST | Bcsuddi
     ಕೋಲ ಶಾಂತಯ್ಯ ಅವರ ವಚನ ……
Advertisement

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

Advertisement

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

ವಚನ: :

ಬಿಸಿಲ ಮುಂದಣ ಮಂಜಿನಂತಾಯಿತ್ತು.

ದಿಟದ ಮುಂದಣ ಸಟೆಯಂತಾಯಿತ್ತು.

ಪುಣ್ಯದ ಮುಂದಣ ಪಾಪದಂತಾಯಿತ್ತು.

ಯೋಗಿಯ ಮುಂದಣ ಸಂಸಾರದಂತಾಯಿತ್ತು.

ಧೀರನ ಮುಂದಣ ಹೇಡಿಯಂತಾಯಿತ್ತು.

ಉರಗನ ಮುಂದಣ ಭೇಕನಂತಾಯಿತ್ತು.

ಹರಿಯ ಮುಂದಣ ಕರಿಯಂತಾಯಿತ್ತು.

ವಿವೇಕದ ಮುಂದಣ ದುಃಖದಂತಾಯಿತ್ತು.

ಪುಣ್ಯಾರಣ್ಯದಹನ ಭೀಮೇಶ್ವರನೆಂಬ

ಸದ್ಗುರು ಕಾರುಣ್ಯವಾಗಲೊಡನೆಎನ್ನ ಸುತ್ತಿಹ ಪ್ರಪಂಚು ಸರ್ವವೂ ಓಡಿದವಯ್ಯಾ!

-ಕೋಲ ಶಾಂತಯ್ಯ

Tags :
Author Image

Advertisement