ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ಕೋಮು ರಾಜಕಾರಣ ಮಾಡುವುದಕ್ಕೆ ಕಾಂಗ್ರೆಸ್‌ನಲ್ಲಿ ಜಾಗವಿಲ್ಲ'- ದಿನೇಶ್‌ ಗುಂಡೂರಾವ್‌

02:32 PM Jan 06, 2024 IST | Bcsuddi
Advertisement

ಹುಬ್ಬಳ್ಳಿ: ಕೋಮು ರಾಜಕಾರಣ ಮಾಡುವುದಕ್ಕೆ ಕಾಂಗ್ರೆಸ್‌ನಲ್ಲಿ ಜಾಗವಿಲ್ಲ. ಜನರು ಬದುಕು, ಉದ್ಯೋಗ ಹಾಗೂ

Advertisement

ಅಭಿವೃದ್ಧಿಗೆ ಆದ್ಯತೆ ನೀಡುವುದು ನಮ್ಮ ಕರ್ತವ್ಯ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ತುಂಬಾ ದೊಡ್ಡ ದೊಡ್ಡ ಸಮಸ್ಯೆಗಳಿವೆ. ಇಂತಹುದೆಲ್ಲಾ ಚರ್ಚೆ ಆಗಬಾರದು ಎಂಬುವುದು ಬಿಜೆಪಿ ಮುಖ್ಯ ಉದ್ದೇಶ. ಹೀಗಾಗಿ ಬೇರೆ ವಿಚಾರವಿಟ್ಟುಕೊಂಡು ಗಮನ ಬೇರೆಡೆ ಸೆಳೆಯುತ್ತಿದ್ದಾರೆಎಂದು ಆರೋಪಿಸಿದರು.

ಕೇಂದ್ರ ಸರ್ಕಾರದಿಂದ ರಾ ಜ್ಯ ಸರ್ಕಾರಕ್ಕೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಹೆಚ್ಚು ಚರ್ಚೆ ಆಗಬೇಕು. ಬರಗಾಲದ ನಯಾ ಪೈಸೆನು ರಾಜ್ಯಕ್ಕೆ ಕೇಂದ್ರವು
ನೀಡಿಲ್ಲ. ಈ ವಿಚಾರ ಬಗ್ಗೆ ಚರ್ಚಿಸೋಣ ಎಂದು ಹೇಳಿದರು.

Advertisement
Next Article