ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕೇಕ್‌ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ..! ಭಾರೀ ಚರ್ಚೆಗೆ ಕಾರಣವಾಯ್ತು ಬರ್ತ್‌ ಡೇ ಕೇಕ್..!‌

01:53 PM Oct 22, 2024 IST | BC Suddi
Advertisement

ಯಾದಗಿರಿ ಜಿಲ್ಲೆಯ ಸುರಪುರ ನಗರದ ಬೇಕರಿಯೊಂದರಲ್ಲಿ ಸಿದ್ಧಪಡಿಸಲಾಗಿರುವ ಕೇಕ್​ ಈಗ ವಿವಾದದ ಕೇಂದ್ರಬಿಂದುವಾಗಿದೆ. ಈ ಕೇಕ್‌ ಮೂಲಕ ಜಿಲ್ಲೆಯಲ್ಲಿನ ಮರಳು ದಂಧೆ ಅನಾವರಣವಾಗಿದೆ ಎನ್ನಲಾಗಿದೆ. ಸುರಪುರದಲ್ಲಿ ಮರಳು ದಂಧೆ ನಡೆಸುವ ಪ್ರಭಾವಿಯೊಬ್ಬನ ಹುಟ್ಟು ಹಬ್ಬಕ್ಕೆ ಈ ಕೇಕ್ ತಯಾರಿಸಲಾಗಿದೆಯಂತೆ. ಮರಳು ಅಡ್ಡೆ, ಟಿಪ್ಪರ್ ಮತ್ತು ಜೆಸಿಬಿ ಇಟ್ಟು ಕೇಕ್ ತಯಾರಿಸಲಾಗಿದೆ. ಮರಳು ಅಡ್ಡೆಯಲ್ಲಿ ಟಿಪ್ಪರ್​ಗೆ ಮರಳು ತುಂಬುವುದು, ನಂತರ ಮರಳು ಸಾಗಾಟ ಮಾಡುವ ಬಗ್ಗೆ ಕೇಕ್ ಮೂಲಕ ತಿಳಿಸಲಾಗಿದೆ. ಮರಳು ದಂಧೆಯ ಕೇಕ್ ಸುರಪುರ ನಗರದಾದ್ಯಂತ ಸಾಕಷ್ಟು ಸದ್ದು ಮಾಡಿದ್ದು, ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Advertisement

Advertisement
Next Article