For the best experience, open
https://m.bcsuddi.com
on your mobile browser.
Advertisement

'ಕೇಂದ್ರದಲ್ಲಿ ಸಚಿವ ಸ್ಥಾನದ ಕುರಿತು ಯಾವುದೇ ನಿರೀಕ್ಷೆಯಿಲ್ಲ'- ಯದುವೀರ್‌

02:04 PM Jun 02, 2024 IST | Bcsuddi
 ಕೇಂದ್ರದಲ್ಲಿ ಸಚಿವ ಸ್ಥಾನದ ಕುರಿತು ಯಾವುದೇ ನಿರೀಕ್ಷೆಯಿಲ್ಲ   ಯದುವೀರ್‌
Advertisement

ಮೈಸೂರು: ಕೇಂದ್ರದಲ್ಲಿ ಸಚಿವ ಸ್ಥಾನದ ಕುರಿತು ಯಾವುದೇ ನಿರೀಕ್ಷೆಯಿಲ್ಲ. ಫಲಿತಾಂಶ ಅಷ್ಟೇ ನಮ್ಮ ನಿರೀಕ್ಷೆ. ಸಚಿವ ಸ್ಥಾನದ ಬಗ್ಗೆ ಮುಂದೆ ನೋಡೋಣ ಎಂದು ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ಬಗ್ಗೆ ಮಾತನಾಡಿದ ಅವರು, ದೇಶ , ರಾಜ್ಯದಲ್ಲಿ ಬಿಜೆಪಿಗೆ ಮುನ್ನಡೆ ಸಿಕ್ಕಿರುವುದು ಖುಷಿಯ ಸಂಗತಿ. ಜನ ಮತ್ತೊಮ್ಮೆ ಸಮಾಜ ಸೇವೆ ಮಾಡಲು ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.

ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮುನ್ನಡೆಯನ್ನೇ ನಿರೀಕ್ಷೆ ಮಾಡಿದ್ದೆವು. ಎಕ್ಸಿಟ್ ಪೋಲ್ ನಲ್ಲಿ ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬಂದಿದೆ ಎಂದು ಹೇಳಿದರು.

Advertisement

Author Image

Advertisement