For the best experience, open
https://m.bcsuddi.com
on your mobile browser.
Advertisement

'ಕೆಟ್ಟ ಶಕುನ'ದಿಂದ ವಿಶ್ವಕಪ್ ನಲ್ಲಿ ಭಾರತಕ್ಕೆ ಸೋಲು - ಮೋದಿ ದೋಷಿಸಿದ ರಾಹುಲ್

06:30 PM Nov 21, 2023 IST | Bcsuddi
 ಕೆಟ್ಟ ಶಕುನ ದಿಂದ ವಿಶ್ವಕಪ್ ನಲ್ಲಿ ಭಾರತಕ್ಕೆ ಸೋಲು   ಮೋದಿ ದೋಷಿಸಿದ ರಾಹುಲ್
Advertisement

ಬೆಂಗಳೂರು: ಭಾನುವಾರ (ನ. 19) ಭಾರತೀಯ ಕ್ರಿಕೆಟ್ ತಂಡ ಮತ್ತು ಅಭಿಮಾನಿಗಳಿಗೆ ಅತ್ಯಂತ ಕೆಟ್ಟ ಮತ್ತು ಬೇಸರದ ದಿನ. 2023 ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಭಾರತವನ್ನು ಸೋಲಿಸಿ ಆರನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು.

ಆದರೆ ಈ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯನ್ನು ದೂಷಿಸಿದ್ದಾರೆ. ಪ್ರಧಾನಿ ವಿಶ್ವಕಪ್ ಫೈನಲ್‌ ಆಟ ನೋಡಲು ಹೋದ ಕಾರಣ ಭಾರತಕ್ಕೆ ಸೋಲಾಗಿದೆ ಎಂದು ಆರೋಪಿಸಿದ್ದಾರೆ

ನರೇಂದ್ರ ಮೋದಿ "ಕೆಟ್ಟ ಶಕುನ" ಎಂದು ರಾಹುಲ್ ಲೇವಡಿ ಮಾಡಿದ್ದು, ನಮ್ಮ ಹುಡುಗರು ವಿಶ್ವಕಪ್ ಗೆಲ್ಲುವ ಹಾದಿಯವರೆಗೆ ಚೆನ್ನಾಗಿ ಆಡಿದ್ದರು ಆದರೆ "ಕೆಟ್ಟ ಶಕುನ" ಅಲ್ಲಿದ್ದ ಕಾರಣ ಅವರನ್ನು ಸೋಲುವಂತೆ ಮಾಡಿತು... ಇದು ದೇಶದ ಜನರಿಗೆ್ ಗೊತ್ತಿದೆ" ಎಂದು ಲೇವಡಿ ಮಾಡಿದರು.

Advertisement

ಕಾಂಗ್ರೆಸ್ ಪಕ್ಷವು ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ರಾಹುಲ್ ಹೇಳಿಕೆಯ ಈ ವೀಡಿಯೊವನ್ನು ಹಂಚಿಕೊಂಡಿದೆ.

Author Image

Advertisement