ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕುರುಬರಿಗೆ ಬಂದೂಕು ನೀಡಲು ಸಿಎಂ ಸಿದ್ದರಾಮಯ್ಯರ ಬಗ್ಗೆ ನಟ ಚೇತನ್ ಹೇಳಿದ್ದು ಇದು.!

07:49 AM Jul 12, 2024 IST | Bcsuddi
Advertisement

 

Advertisement

ಬೆಂಗಳೂರು : ಕುರಿ ಕಳ್ಳತನ ತಡೆಯಲು ಕುರುಬರಿಗೆ ಬಂದೂಕು ನೀಡಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದು, ಇದು ಅಸಂಬದ್ಧ, ದೋಷಪೂರಿತ ಮತ್ತು ಕುರುಬ ಜಾತಿ ರಾಜಕಾರಣ ಎಂದು ನಟ ಚೇತನ್‌ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಈ ಬಗ್ಗೆ ಪೋಸ್ಟ್‌ ಮಾಡಿರುವ ಅವರು,  ಕುರಿ ಕಳ್ಳತನ ತಡೆಯಲು ಕುರುಬರಿಗೆ ಬಂದೂಕು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆ ಮತ್ತು ಅರಣ್ಯ ಪ್ರದೇಶಗಳಲ್ಲಿ ಕುರಿ ಮೇಯಿಸಲು ಕೂಡ ಅವಕಾಶ ನೀಡಲು ಮುಂದಾಗಿದ್ದಾರೆ ಇದು ಅಸಂಬದ್ಧ, ದೋಷಪೂರಿತ ಮತ್ತು ಕುರುಬ ಜಾತಿ ರಾಜಕಾರಣ. ಸದೃಢ ಪ್ರಜಾಪ್ರಭುತ್ವಕ್ಕೆ ಪೊಲೀಸ್ ಮತ್ತು ರಕ್ಷಣೆಯ ಅಗತ್ಯವಿದೆಯೇ ಹೊರತು ಬಂದೂಕು ಹೊಡೆಯುವ ಕುರುಬರಲ್ಲ.  ಅಲ್ಲದೆ, ಕಾಡುಗಳಲ್ಲಿನ ಮೇಯಿಸುವಿಕೆಯು ಈಗಾಗಲೇ ದುರ್ಬಲವಾಗಿರುವ ನಮ್ಮ ಪರಿಸರ ವ್ಯವಸ್ಥೆಗಳನ್ನು ನಾಶಪಡಿಸುತ್ತದೆ. ವಿನಾಶಕಾರಿ-ರಾಮಯ್ಯ ಎಂದು ಬರೆದುಕೊಂಡಿದ್ದಾರೆ.

Tags :
ಕುರುಬರಿಗೆ ಬಂದೂಕು ನೀಡಲು ಸಿಎಂ ಸಿದ್ದರಾಮಯ್ಯರ ಬಗ್ಗೆ ನಟ ಚೇತನ್ ಹೇಳಿದ್ದು ಇದು.!
Advertisement
Next Article