ಕುಮಾರಸ್ವಾಮಿ RSS ಗೇಟ್ ಕೀಪರ್.!
07:52 AM Jan 31, 2024 IST | Bcsuddi
Advertisement
ಬೆಂಗಳೂರು: RSS ನಿಂದ ಸ್ವಾಗತ ಪಡೆಯುವ ದುಸ್ಥಿತಿ ನನಗೆ ಬಂದಿಲ್ಲ ಎಂದಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಈಗ ಅದೇ RRSನ ಗೇಟ್ ಕೀಪರ್, ಸೇವಕನಾಗಿ ಹಸಿರು ಶಾಲನ್ನು ಕಿತ್ತೆಸೆದು ಕೇಸರಿ ಶಾಲು ಹಾಕಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈಗ ಕೇಸರಿ ಶಾಲು ನಿಮಗೆ ದುಸ್ಥಿತಿ ಬಂದಿದ್ದರ ಸಂಕೇತವಲ್ಲವೇ ಎಂದು 'ಕೈ'ಪಡೆ ಪ್ರಶ್ನಿಸಿದೆ. ವಯಸ್ಸಾದ ಮಾಜಿ ಪ್ರಧಾನಿ ದೇವೇಗೌಡರನ್ನು ಕರೆದುಕೊಂಡು ಬಿಜೆಪಿ ನಾಯಕರ ಮನೆ ಬಾಗಿಲಿಗೆ ಅಲೆಯುತ್ತಿರುವುದು ದುಸ್ಥಿತಿಯ ದ್ಯೋತಕವಲ್ಲವೇ ಎಂದು ವ್ಯಂಗ್ಯವಾಡಿದೆ.
Advertisement