For the best experience, open
https://m.bcsuddi.com
on your mobile browser.
Advertisement

'ಕಾಂಗ್ರೆಸ್ ತೊರೆಯುವವರು ದೇಶದ್ರೋಹಿಗಳು, ಅವಕಾಶವಾದಿಗಳು'- ಅಶೋಕ್ ಗೆಹ್ಲೋಟ್

11:15 AM May 28, 2024 IST | Bcsuddi
 ಕಾಂಗ್ರೆಸ್ ತೊರೆಯುವವರು ದೇಶದ್ರೋಹಿಗಳು  ಅವಕಾಶವಾದಿಗಳು   ಅಶೋಕ್ ಗೆಹ್ಲೋಟ್
Advertisement

ಜೈಪುರ: ಬೆನ್ನಿಗೆ ಚೂರಿ ಹಾಕುವವರು ಇನ್ನೂ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ತೊರೆಯುವವರು ದೇಶದ್ರೋಹಿಗಳು ಮತ್ತು ಅವಕಾಶವಾದಿಗಳು ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಲೋಕಸಭಾ ಚುನಾವಣೆಗೂ ಮುನ್ನ ಮಹೇಂದ್ರ ಜೀತ್ ಸಿಂಗ್ ಮಾಳವಿಯಾ, ಲಾಲ್‌ಚಂದ್ ಕಟಾರಿಯಾ, ರಾಜೇಂದ್ರ ಸಿಂಗ್ ಯಾದವ್ ಸೇರಿದಂತೆ ಹಲವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ನಮ್ಮ ಪಕ್ಷಕ್ಕೆ ದ್ರೋಹ ಬಗೆದ ಇನ್ನೂ ಕೆಲವರು ಪಕ್ಷದಲ್ಲಿಯೇ ಮುಂದುವರೆದಿದ್ದಾರೆ. ಅವರೆಲ್ಲರೂ ಈಗಲಾದರೂ ಪಕ್ಷಕ್ಕೆ ಆಸ್ತಿಯಾಗಲು ಪ್ರಯತ್ನ ಪಡಬೇಕು ಎಂದು ತಿಳಿಸಿದ್ದಾರೆ.

ಕಷ್ಟದ ಸಮಯದಲ್ಲಿ ಪಕ್ಷದೊಂದಿಗೆ ಬೆನ್ನೆಲುಬಾಗಿ ನಿಲ್ಲುವುದು ಮುಖ್ಯ. ಪಕ್ಷದ ಎಲ್ಲಾ ನಾಯಕರು, ಕಾರ್ಯಕರ್ತರು ಯಶಸ್ಸು ಪಡೆಯಬೇಕೆಂದು ನಾನು ಬಯಸುತ್ತೇನೆ. ಅವರೆಲ್ಲಾ ಯಶಸ್ವಿಯಾದರೆ ಕಾಂಗ್ರೆಸ್ ಇನ್ನಷ್ಟು ಬಲಗೊಳ್ಳಲಿದೆ. ಪಕ್ಷಕ್ಕೆ, ಸಮಾಜಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು. ಪಕ್ಷದ ಟಿಕೆಟ್‌ನಲ್ಲಿ ಯಾವುದೇ ಅಭ್ಯರ್ಥಿ ಗೆದ್ದರೆ ಅದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನ ಖಾತೆಗೆ ಹೋಗುತ್ತದೆ ಎಂದರು.

Advertisement

Author Image

Advertisement