For the best experience, open
https://m.bcsuddi.com
on your mobile browser.
Advertisement

ಕಲಬುರಗಿ: 6 ತಿಂಗಳ ಹಿಂದೆ ಮೃತಪಟ್ಟ ಅಧಿಕಾರಿಗೆ ಟ್ರಾನ್ಸಫರ್ ಮಾಡಿದ ರಾಜ್ಯ ಸರ್ಕಾರ

04:30 PM Jul 13, 2024 IST | Bcsuddi
ಕಲಬುರಗಿ  6 ತಿಂಗಳ ಹಿಂದೆ ಮೃತಪಟ್ಟ ಅಧಿಕಾರಿಗೆ ಟ್ರಾನ್ಸಫರ್ ಮಾಡಿದ ರಾಜ್ಯ ಸರ್ಕಾರ
Advertisement

ಕಲಬುರಗಿ : ಆರು ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿಯನ್ನು ರಾಜ್ಯ ಸರ್ಕಾರ ಮತ್ತು ಇಲಾಖೆಯಿಂದ ಟ್ರಾನ್ಸಫರ್ ಮಾಡಿ ಆದೇಶ ಹೊರಡಿಸಿ ಎಡವಟ್ಟು ಮಾಡಿದಂತಹ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ನಗರಾಭಿವೃದ್ಧಿ ಇಲಾಖೆಯಲ್ಲಿ ನಡೆದಿದೆ. ಕಿರಿಯ ಇಂಜನಿಯರ್‌ರಾಗಿದ್ದ ಅಶೋಕ ಪುಟಪಾಕ್ ಕಳೆದ ಜನೆವರಿ 12 ರಂದು ಮೃತ ಪಟ್ಟಿದ್ದರು. ಜುಲೈ 9 ರಂದು ಕೊಡಗಿಗೆ ವರ್ಗಾವಣೆ ಮಾಡಿ ಆದೇಶ ಮಾಡಿದೆ. ಅಶೋಕ್ ಪುಟಪಾಕ್ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗಾಂವ್ ಗ್ರಾಮದ ನಿವಾಸಿಯಾಗಿದ್ದರು. ಇಲಾಖೆಯ ನೌಕರ ಮೃತಪಟ್ಟ ವಿಚಾರ ಗೊತ್ತಿಲ್ಲದೆ ವರ್ಗಾವಣೆ ಮಾಡಿದೆಯಾ ಅಥವಾ ಸಾಯುವ ಮುನ್ನ ಅಶೋಕ್ ಪುಟಪಾಕ್ ವರ್ಗಾವಣೆ ಬಯಸಿದ್ದರಾ? ಅಶೋಕ್ ಮೃತಪಟ್ಟ ಮೇಲೆ ಅವರ ಸಾವಿನ ಬಗ್ಗೆ ಮಾಹಿತಿ ಇಲ್ಲದೆಯೇ ವರ್ಗಾವಣೆ ಮಾಡಿದೆಯಾ ಸರ್ಕಾರ ಎಂಬುವುದು ತಿಳಿಯಬೇಕಾಗಿದೆ.

Author Image

Advertisement