For the best experience, open
https://m.bcsuddi.com
on your mobile browser.
Advertisement

'ಕರ್ಮ ಹಿಂಬಾಲಿಸುತ್ತೆ, ಅವನ ಪಾಪಕರ್ಮ ಅವನ ಸುಡುತ್ತೆ' : ಸ್ಟಾರ್‌ ನಟನನ್ನ ಟಾರ್ಗೆಟ್‌ ಮಾಡಿ, ಈ ಟ್ವೀಟ್‌ ಮಾಡಿದ್ರಾ ಜಗ್ಗೇಶ್‌..?

04:02 PM Jun 13, 2024 IST | Bcsuddi
 ಕರ್ಮ ಹಿಂಬಾಲಿಸುತ್ತೆ  ಅವನ ಪಾಪಕರ್ಮ ಅವನ ಸುಡುತ್ತೆ    ಸ್ಟಾರ್‌ ನಟನನ್ನ ಟಾರ್ಗೆಟ್‌ ಮಾಡಿ  ಈ ಟ್ವೀಟ್‌ ಮಾಡಿದ್ರಾ ಜಗ್ಗೇಶ್‌
Advertisement

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪ ಎದುರಿಸುತ್ತಿರುವ ನಟ ದರ್ಶನ್​​ ಬಂಧನವಾಗಿದೆ. ಕನ್ನಡ ಚಿತ್ರರಂಗ ಮೌನ ವಹಿಸಿದೆ. ಮತ್ತೊಂದೆಡೆ, ಕೊಲೆಯಾದ ರೇಣುಕಾಸ್ವಾಮಿ ತಾಯಿ ದರ್ಶನ್ ಸಿನಿಮಾಗಳನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ‌. ಆದರೆ, ಈ ಬಗ್ಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಮಧ್ಯೆ ನಟ ಜಗ್ಗೇಶ್​​ ಮಾಡಿರುವ ಸೋಷಿಯಲ್​​ ಮೀಡಿಯಾ ಪೋಸ್ಟ್ ಹೆಚ್ಚಿನವರ ಗಮನ ಸೆಳೆದಿದೆ. ರಾಜಕಾರಣಿ, ನಟ - ಜಗ್ಗೇಶ್ ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಒಂದನ್ನು ಶೇರ್ ಮಾಡಿದ್ದು, ಸಖತ್​ ಸದ್ದು ಮಾಡುತ್ತಿದೆ‌. ಈ ಟ್ವೀಟ್​​​​ ಎಲ್ಲೆಡೆ ವೈರಲ್‌ ಆಗುತ್ತಿದ್ದು, ಬಹಳ ಚರ್ಚೆಗೆ ಗ್ರಾಸವಾಗಿದೆ. ನಟ ದರ್ಶನ್ ಹೆಸರನ್ನು ಜಗ್ಗೇಶ್ ಎಲ್ಲೂ ಪ್ರಸ್ತಾಪಿಸದಿದ್ದರೂ, ಬಹುತೇಕ ನೆಟ್ಟಿಗರು ಇದು ದರ್ಶನ್​ ಅವರಿಗೇನೇ ಹಾಕಿರೋ ಪೋಸ್ಟ್​ ಎಂದು ಭಾವಿಸಿದಂತಿದೆ. ''ಸರ್ವ ಆತ್ಮಾನೇನಬ್ರಹ್ಮ, ಸರ್ವ ಜೀವಿಯಲ್ಲಿ ದೇವರಿದ್ದಾನೆ. ಯಾರನ್ನೂ ಕೊಲ್ಲುವ ಹಕ್ಕು ಜೀವನಿಗಿಲ್ಲ. ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ. ಅವನ ಪಾಪಕರ್ಮ ಅವನ ಸುಡುತ್ತದೆ. ಕಲಿಯುಗದಲ್ಲಿ ದೇವರು ಕಲ್ಲಲ್ಲ. ಎಲ್ಲಾ ಕರ್ಮಕ್ಕೂ ತಕ್ಷಣ ಫಲಿತಾಂಶ ಉಂಟು. ರಾಮನಾಗು, ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ. ಮದಕ್ಕೆ ಕಾರುಣ್ಯದ ಅರಿವಿಲ್ಲ'' ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ಜಗ್ಗೇಶ್ ಅವರ ಒಂದು ಹೇಳಿಕೆ ವಿಚಾರವಾಗಿ ದರ್ಶನ್ ಅಭಿಮಾನಿಗಳು ಮೈಸೂರಿನಲ್ಲಿ ಜಗ್ಗೇಶ್​​​ಗೆ ಮುತ್ತಿಗೆ ಹಾಕಿದ್ದರು. ಸದ್ಯ ಜಗ್ಗೇಶ್ ಸನಾತನ ಧರ್ಮಕ್ಕೆ ಹೋಲಿಸಿ ಪಾಪ ಯಾರನ್ನೂ ಬಿಡೋದಿಲ್ಲ ಎಂದು ಹೇಳಿದ್ದು, ಹೆಚ್ಚಿನ ಸಂಖ್ಯೆಯ ನೆಟ್ಟಿಗರು ಇದು ದರ್ಶನ್​​ ಅವರಿಗೆ ಕೊಟ್ಟ ಟಾಂಗ್​ ಎಂದು ಭಾವಿಸಿದ್ದಾರೆ. ಜಗ್ಗೇಶ್​ ಟ್ವೀಟ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Author Image

Advertisement