For the best experience, open
https://m.bcsuddi.com
on your mobile browser.
Advertisement

ಕರ್ತವ್ಯ ನಿರತ ಕರುನಾಡಿನ ವೀರ ಯೋಧ ಹೃದಯಾಘಾತಕ್ಕೆ ಬಲಿ

09:09 AM Feb 06, 2024 IST | Bcsuddi
ಕರ್ತವ್ಯ ನಿರತ ಕರುನಾಡಿನ ವೀರ ಯೋಧ ಹೃದಯಾಘಾತಕ್ಕೆ ಬಲಿ
Advertisement

ಬಾಂಗ್‌ಡೋಂಗ್ರೆ : ಕರ್ತವ್ಯ ನಿರತ ಕರುನಾಡಿನ ಯೋಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಸಿಕ್ಕಿಂನ ಬಾಂಗ್ ಡೋಂಗ್ರೆಯಲ್ಲಿ ನಡೆದಿದೆ. ಗದಗ ಜಿಲ್ಲೆ ನರಗುಂದ ತಾಲೂಕಿನ ರಡ್ಡೆರನಾಗನೂರ ಗ್ರಾಮದ ರಾಮನಗೌಡ ಚಂದ್ರಗೌಡರ (40) ಎಂಬುವವರೇ ಮೃತಪಟ್ಟ ಯೋಧರಾಗಿದ್ದಾರೆ. ಬಾಂಗ್ ಡೋಂಗ್ರೆಯಲ್ಲಿ ಕರ್ತವ್ಯದಲ್ಲಿದ್ದಾಗ ಹಿಮಪಾತದ ನಡುವೆ ರಕ್ತದೊತ್ತಡ ಏರುಪೇರಾಗಿ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ. ಇವರು 2002 ರಲ್ಲಿ ಇಂಡಿಯನ್ ಟಿಬೆಟಿಯನ್ ಬಾರ್ಡರ್ ಸೆಕ್ಯೂರಿಟಿ ಫೋರ್ಸ್‌ಗೆ ನೇಮಕವಾಗಿದ್ದರು.

Author Image

Advertisement