For the best experience, open
https://m.bcsuddi.com
on your mobile browser.
Advertisement

ಐಪಿಎಸ್ ವೃತ್ತಿ ಬಿಟ್ಟು ಆಧ್ಯಾತ್ಮದತ್ತ ನಡಿಗೆ ಹಾಕಿದ್ದ ಅಧಿಕಾರಿ ವಾಪಸ್..!

09:48 AM Sep 18, 2024 IST | BC Suddi
ಐಪಿಎಸ್ ವೃತ್ತಿ ಬಿಟ್ಟು ಆಧ್ಯಾತ್ಮದತ್ತ ನಡಿಗೆ ಹಾಕಿದ್ದ ಅಧಿಕಾರಿ ವಾಪಸ್
Advertisement

ಬೆಂಗಳೂರು: ನಗರದ ಡಿಸಿಪಿ ರ‍್ಯಾಂಕ್‌ ಐಪಿಎಸ್ ಅಧಿಕಾರಿಯೊಬ್ಬರು ನಿನ್ನೆ ಡ್ಯೂಟಿಯನ್ನ ಅರ್ಧಕ್ಕೆ ಬಿಟ್ಟು ಆಧ್ಯಾತ್ಮತ್ತ ಹೋಗಿದ್ದಾರೆ ಎನ್ನಲಾಗ್ತಿದೆ. ನಿನ್ನೆ ಕಮಿಷನರ್ ವಾರದ ಸಭೆಯಲ್ಲಿ ಭಾಗಿಯಾಗಿದ್ದ ಆ ಅಧಿಕಾರಿ ಮಧ್ಯಾಹ್ನ ಸಭೆ ಮುಗಿಸಿ ನೇರವಾಗಿ ಮನೆಗೆ ತೆರಳಿದ್ರಂತೆ. ಮನೆಯಲ್ಲಿ ಫಾರ್ಮಲ್ ಬಟ್ಟೆ ಬದಲಿಸಿ ಪಂಚೆ ಶರ್ಟ್ ಧರಿಸಿದ ಆ ಅಧಿಕಾರಿ ಸರ್ಕಾರಿ ವಾಹನದಲ್ಲೆ ನೇರವಾಗಿ ಏರ್‌ಪೋರ್ಟ್‌ ಬಳಿಗೆ ಡ್ರಾಪ್ ತೆಗೆದುಕೊಂಡಿದ್ದಾರೆ. ಇಲ್ಲಿ ತಮ್ಮ ಸಿಬ್ಬಂದಿಗೆ ಇಲಾಖೆಯ ಐಡಿ ಕಾರ್ಡ್ ಮೊಬೈಲ್ ನೀಡಿ ನನಗೆ ಈ ಲೌಕಿಕ ಜೀವನ ಸಾಕು ನಾನು ಬೇರೆ ಜೀವನ ನಡೆಸಬೇಕು ಅಂತ ಹೇಳಿಕೊಂಡು ತಾವು ಅಲ್ಲೆ ಉಳಿದುಕೊಂಡು ಸಿಬ್ಬಂದಿ ವಾಪಸ್ ಕಳುಹಿಸಿದ್ದಾರಂತೆ. ಆ ಅಧಿಕಾರಿ ಕುರಿತಂತೆ ಪೊಲೀಸರು ಕೂಡ ಹುಡುಕಾಟ ನಡೆಸಿದ್ದರು. ಸದ್ಯ ಆ ಅಧಿಕಾರಿ ಕೆಲವರ ಸಂಪರ್ಕಕ್ಕೆ ಸಿಕ್ಕಿದ್ದು, ಮೌನವೃತಕ್ಕೆ ಜಾರಿ ಧ್ಯಾನಮಗ್ನರಾಗಿದ್ರು ಎಂದು ತಿಳಿದು ಬಂದಿದೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Advertisement

Author Image

Advertisement