ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ಎಲ್ಲ ಗೊತ್ತಿದ್ದೂ ಗೊತ್ತಿಲ್ಲದ ಹಾಗೆ ನಟಿಸುತ್ತಾರೆ ಯತ್ನಾಳ್‌'- ಸಿಎಂ ಟಾಂಗ್‌

02:34 PM Dec 15, 2023 IST | Bcsuddi
Advertisement

ಬೆಳಗಾವಿ:ಯತ್ನಾಳ್‌ ಪೆದ್ದ ಜಾಣ. ಎಲ್ಲ ಗೊತ್ತಿದ್ದೂ ಗೊತ್ತಿಲ್ಲದ ಹಾಗೆ ನಟಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಟಾಂಗ್‌ ನೀಡಿದ್ದಾರೆ.

Advertisement

ಅಧಿವೇಶನದಲ್ಲಿ ಮಾತನಾಡಿದ ಅವರು, ಯತ್ನಾಳ್ ಪೆದ್ದ ಜಾಣ. ಬಹಳ ಬುದ್ಧಿವಂತರು. ಅದಕ್ಕೇ ನೀವು ಕ್ರಿಟಿಕಲ್ ಇನ್‌ಸೈಡರ್ ಎಂದು ಯತ್ನಾಳ್‌ ಕಾಲೆಳೆದರು. ಸಿಎಂ ಮಾತಿಗೆ ತಿರುಗೇಟು ಕೊಟ್ಟ ಯತ್ನಾಳ್‌, ಸರ್ ನೀವು ಎಲ್ರೂ ಒಂದಾದ್ರೆ ನಾವೇನು ಮಾಡೋದು ಎಂದು ಹೇಳಿದರು.

ನಾವು ಎರಡು, ಮೂರನೇ ದರ್ಜೆ ನಾಯಕರು. ನೀವು ಎಲ್ಲಿ ನಿಲ್ಲುತ್ತಾರೋ, ಯಾರನ್ನ ಕೆಡವ್ತೀರೋ ಯಾರಿಗೆ ಗೊತ್ತು? ನಿಮ್ಮ ಅಡ್ಜಸ್ಟ್‌ಮೆಂಟ್ ನಮಗಂತೂ ಗೊತ್ತಿಲ್ಲ ಎಂದು ಯತ್ನಾಳ್‌ ಅಲ್ಲಿಯೇ ಠಕ್ಕರ್‌ ಕೊಟ್ಟರು.

ಈ ಮಾತಿಗೆ ಪ್ರತಿಕ್ರಿಯಿಸಿದ ಸಿಎಂ, ಈ ಥರ ಮಾತಾಡೋಡು ಯತ್ನಾಳ್ ಮಾತ್ರ. ಅವರ ಪಕ್ಷದ ವಿರುದ್ಧವೇ ಮಾತಾಡೋದು, ಭ್ರಷ್ಟಾಚಾರ ಆರೋಪ ಮಾಡೋದು ಯತ್ನಾಳ್ ಮಾತ್ರ ಎಂದು ಹೇಳಿದರು.

ಅದಕ್ಕೆ ಉತರ್‍ತರಿಸಿದ ಯತ್ನಾಳ್‌ ಲೆಕ್ಕ ಕೇಳಲು ಒಬ್ಬರಾದ್ರೂ ಇರಬೇಕಲ್ಲ. ಎಲ್ಲರ ಲೆಕ್ಕ ಪತ್ರ ನಾನು ಕೇಳುತ್ತೇನೆ. ಏನಾಗುತ್ತೊ ಆಗಲಿ. ನನಗೆ ಸ್ಥಾನಮಾನ ಸಿಗಲ್ಲ. ಏನೂ ಆಗದಿದ್ರೂ ಶಾಸಕ‌ ಮಾತ್ರ ಆಗ್ತೇನೆ. ಯಾರೂ ತಪ್ಪಿಸೋಕೆ ಆಗಲ್ಲ. ಶಾಸಕ ಆಗೋದನ್ನು ತಪ್ಪಿಸೋಕೆ ಆದ್ರೆ ಪಕ್ಷೇತರವಾಗಿ ನಿಂತು ಎಂಎಲ್‌ಸಿ ಆಗಿ ಬರ್ತೀನಿ. ಎಲ್ಲರ ಬಂಡವಾಳ ಬಿಚ್ಚಿಡ್ತೀನಿ, ಬಿಡಲ್ಲ ಎಂದು ವಾಗ್ದಾಳಿ ನಡೆಸಿದರು

Advertisement
Next Article