For the best experience, open
https://m.bcsuddi.com
on your mobile browser.
Advertisement

ಎತ್ತಿನಹೊಳೆ: ಪ್ರಯೋಗಿಕ ಹಂತದಲ್ಲಿ ಮತ್ತೆ ಜಲಸ್ಪೋಟ, ಮನೆಗಳಿಗೆ ನುಗ್ಗಿದ ನೀರು

10:07 AM Dec 20, 2023 IST | Bcsuddi
ಎತ್ತಿನಹೊಳೆ  ಪ್ರಯೋಗಿಕ ಹಂತದಲ್ಲಿ ಮತ್ತೆ ಜಲಸ್ಪೋಟ  ಮನೆಗಳಿಗೆ ನುಗ್ಗಿದ ನೀರು
Advertisement

ಹಾಸನ: ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆಯ ಪ್ರಯೋಗಿಕ ಹಂತದ ಚಾಲನೆ ವೇಳೆ ಮತ್ತೆ ನೀರು ಸೋರಿಕೆಯಾಗಿದ್ದು ಹಾಸನದ ಹೆಬ್ಬಸಾಲೆ ಗ್ರಾ. ಪಂ ವ್ಯಾಪ್ತಿಯ ದೇಖ್ಲಾವು ಸಂಪೂರ್ಣ ಕೆಸರುಮಯವಾಗಿದೆ.

ಪೈಪ್ ನಿಂದ ಹೊರಬಂದ ಭಾರೀ ಪ್ರಮಾಣದ ನೀರು ಹಲವು ಮನೆಗಳಿಗೆ ನುಗ್ಗಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಅಷ್ಟೇ ಅಲ್ಲದೇ ಈ ಊರಿನ ರಸ್ತೆ ಸಂಪೂರ್ಣ ಕೆಸರಿನಿಂದ ತುಂಬಿದ್ದು ಗ್ರಾಮದ ಜನರ ಸಂಚಾರಕ್ಕೂ ತೊಡಕು ಉಂಟಾಗಿದೆ.

ಈ ಹಿಂದೆಯೂ ಹಾರ್ಲೆ ಕೂಡಿಗೆ ಸಮೀಪ ಪರೀಕ್ಷಾರ್ಥ ವೇಳೆ ನೀರು ಹರಿದು ಬಂದಿದ್ದು ಅಪಾರ ಹಾನಿ ಉಂಟಾಗಿತ್ತು. ಈಗ ಮತ್ತೆ ಈ ಹಾನಿ ಉಂಟಾಗಿರುವುದರಿಂದ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

Advertisement

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಿಂದ ಬೆಂಗಳೂರು ತುಮಕೂರು ಸೇರಿದಂತೆ ಅನೇಕ ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದು ಹೇಳಲಾಗುತ್ತದೆ.

Author Image

Advertisement