For the best experience, open
https://m.bcsuddi.com
on your mobile browser.
Advertisement

ಉಡುಪಿ: ನಾಲ್ವರ ಹತ್ಯೆಗೆ ಸಂಭ್ರಮ- 'ಹಿಂದೂ ಮಂತ್ರ' ಇನ್‌ಸ್ಟಾಗ್ರಾಮ್‌ ಪೇಜ್ ಮೇಲೆ ಪೊಲೀಸ್ ಕೇಸ್

10:20 AM Nov 17, 2023 IST | Bcsuddi
ಉಡುಪಿ  ನಾಲ್ವರ ಹತ್ಯೆಗೆ ಸಂಭ್ರಮ   ಹಿಂದೂ ಮಂತ್ರ  ಇನ್‌ಸ್ಟಾಗ್ರಾಮ್‌ ಪೇಜ್ ಮೇಲೆ ಪೊಲೀಸ್ ಕೇಸ್
Advertisement

ಉಡುಪಿ: ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ,ಹತ್ಯೆಯನ್ನು ಸಂಭ್ರಮಿಸಿ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಪೋಸ್ಟ್ ಹರಿಬಿಟ್ಟಿದ್ದಾರೆ. 'ಹಿಂದೂ ಮಂತ್ರ' ಹೆಸರಿನ ಇನ್ಸ್ಟಾ ಗ್ರಾಮ್ ಪೇಜ್ ನಲ್ಲಿ ಈ ಪೋಸ್ಟ್ ಮಾಡಲಾಗಿದೆ. '15 ನಿಮಿಷದಲ್ಲಿ ನಾಲ್ಕು ಮುಸ್ಲಿಮರನ್ನು ಕೊಂದು ವಿಶ್ವ ದಾಖಲೆ ನಿರ್ಮಿಸಿದ್ದಾನೆ' ಎನ್ನುವ ಶೀರ್ಷಿಕೆಯನ್ನು ಈ ಪೇಜ್ ಹೊಂದಿದೆ. ಪೋಸ್ಟ್ ನಲ್ಲಿ ಹತ್ಯೆಯ ಆರೋಪಿ ಪ್ರವೀಣ್ ಅರುಣ್ ಚೌಗುಲೆ ತಲೆಗೆ ಕಿರೀಟ ತೊಡಿಸಲಾಗಿದೆ.ಉಡುಪಿಯ ಹುಡುಗಿಯರ ವಿಚಾರದಲ್ಲಿ ಯಾರೂ ಬಂದಿಲ್ಲ, ಆದ್ದರಿಂದ ನಾವು ಈ ವಿಚಾರಕ್ಕೆ ಬರುವುದಿಲ್ಲ ಎನ್ನುವ ಅಡಿಬರಹವನ್ನು ಈ ಪೋಸ್ಟ್ ಹೊಂದಿದೆ.ಪೋಸ್ಟ್ ಗಮನಿಸಿದ ಪೊಲೀಸರು ,ಹಿಂದೂ ಮಂತ್ರ ಇನ್ಸ್ಟಾ ಗ್ರಾಮ್ ಪೇಜ್ ಮೇಲೆ ಸೂಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Author Image

Advertisement