For the best experience, open
https://m.bcsuddi.com
on your mobile browser.
Advertisement

ಇಂದು ಮಧ್ಯರಾತ್ರಿ ಪ್ರಜ್ವಲ್ ರಾಜ್ಯಕ್ಕೆ ಎಂಟ್ರಿ..? ಅಲರ್ಟ್ ಆದ SIT

09:39 AM May 30, 2024 IST | Bcsuddi
ಇಂದು ಮಧ್ಯರಾತ್ರಿ ಪ್ರಜ್ವಲ್ ರಾಜ್ಯಕ್ಕೆ ಎಂಟ್ರಿ    ಅಲರ್ಟ್ ಆದ sit
Advertisement

ಬೆಂಗಳೂರು : ಇಂದು ಮೇ 30 ರ ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ರಾಜ್ಯಕ್ಕೆ ಬರಲು ಟಿಕೆಟ್ ಬುಕ್‌ ಆದ ಹಿನ್ನೆಲೆಯಲ್ಲಿ ಎಸ್ ಐಟಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ.

ಮುಂಜಾನೆಯಿಂದಲೇ ಎಸ್ ಐಟಿ ಅಧಿಕಾರಿಗಳು ಏರ್ಪೋರ್ಟ್ ನಲ್ಲೆ ಕಾದು ಕುಳಿತಿದ್ದಾರೆ. ಜರ್ಮನಿಯ ಮ್ಯೂನಿಚ್ ಏರ್ಪೋರ್ಟ್ ನಿಂದ ಕೆ ಐಎಎಲ್ ಗೆ ಟಿಕೆಟ್ ಬುಕಿಂಗ್ ಆಗಿದ್ದು, ಲುಪ್ತಾನ್ಸಾ LH764 ವಿಮಾನದಲ್ಲಿ ಟಿಕೆಟ್ ಬುಕ್ ಆಗಿದೆ.

ತಿಂಗಳ ಬಳಿಕ ಪ್ರಜ್ವಲ್ ದೇಶಕ್ಕೆ ವಾಪಸ್ ಆಗ್ತಿದ್ದು ಏರ್ ಪೋರ್ಟ್ ನಲ್ಲೆ ಪ್ರಜ್ವಲ್‌ನನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಲಿದ್ದಾರೆ. ಇಂದು ಭಾರತೀಯ ಕಾಲಮಾನ ಮಧ್ಯಾಹ್ನ 12:05ಕ್ಕೆ ಮ್ಯೂನಿಚ್ ನಿಂದ ಹೊರಡಲಿರುವ ವಿಮಾನ ಮಧ್ಯರಾತ್ರಿ 12: 30ಕ್ಕೆ ಬೆಂಗಳೂರು ಏರ್ಪೋರ್ಟ್ ತಲುಪಲಿದೆ. ಎಸ್ ಐಟಿ Business ಕ್ಲಾಸ್ ಟಿಕೆಟ್ ಬುಕ್ ಮಾಡಿರೋ ಪ್ರಜ್ವಲ್ ಟ್ರಾವಲ್ ಟ್ರಾಕಿಂಗ್ ನ ಮೇಲೆ ಕಣ್ಣಿಟ್ಟಿದೆ.

Advertisement

ಮೊದಲಿಗೆ ಟರ್ಮಿನಲ್ ಎರಡರ ಇಮಿಗ್ರೇಷನ್ ಗೆ ಆಗಮಿಸುವ ಪ್ರಜ್ವಲ್ ಬಗ್ಗೆ ಕೂಡಲೆ ಸಿಐಎಸ್ ಎಪ್ ಸಿಬ್ಬಂದಿ ವಶಕ್ಕೆ ಪಡೆದು ನಂತರ ಎಸ್ ಐ ಟಿ ಅಧಿಕಾರಿಗಳ ವಶಕ್ಕೆ ನೀಡಲಿದ್ದಾರೆ.

Author Image

Advertisement