ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ಇಂಡಿ' ಮೈತ್ರಿಕೂಟಕ್ಕೆ ತೀವ್ರ ಹಿನ್ನಡೆ - ಸಭೆಯಿಂದ ದೂರ ಉಳಿದ ಉದ್ಧವ್ ಠಾಕ್ರೆ

04:13 PM Jun 05, 2024 IST | Bcsuddi
Advertisement

ನವದೆಹಲಿ: ಕೇಂದ್ರದಲ್ಲಿ ಸರಕಾರ ರಚಿಸಬೇಕೆಂಬ ಶತಾಯ-ಗತಾಯ ಪ್ರಯತ್ನದಲ್ಲಿ ಇರುವ 'ಇಂಡಿ' ಮೈತ್ರಿಕೂಟಕ್ಕೆ ಮತ್ತೊಂದು ಹಿನ್ನಡೆ ಉಂಟಾಗಿದೆ.

Advertisement

ಶಿವಸೇನೆ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು 'ಇಂಡಿ' ಮೈತ್ರಿಕೂಟದ ಸಭೆಗೆ ಹಾಜರಾಗಿಲ್ಲ. ಈ ಮೂಲಕ ಅವರು ಮೈತ್ರಿಕೂಟದಿಂದ ಹೊರಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸದ್ಯ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಯಾವ ಮೈತ್ರಿಕೂಟಕ್ಕೆ ಬೆಂಬಲಿಸಲಿದ್ದಾರೆ ಎಂಬ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಹಾಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ಉದ್ಧವ್ ಠಾಕ್ರೆ ಅವರಿಗೆ ಗಾಳ ಹಾಕುವ ಪ್ರಯತ್ನದಲ್ಲಿದ್ದಾರೆ.

Advertisement
Next Article