ಆಷಾಡದಲ್ಲಿ ಕೆ ಆರ್ ಎಸ್ ಡ್ಯಾಂಗೆ ಬಾಗಿನ: ಆನಂತರ ಅಧಿಕಾರಿಗಳಿಗೆ ಬಾಡೂಟ.!
05:05 PM Jul 29, 2024 IST | BC Suddi
Advertisement
ಮಂಡ್ಯ: ಇಂದು ಮಂಡ್ಯ ಜಿಲ್ಲೆಯ ಕೆ ಆರ್ ಎಸ್ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬಾಗಿನ ಅರ್ಪಿಸಿದರು. ಆದರೇ ಸಂಪ್ರದಾಯ ಮುರಿಯುವಂತೆ ಆಷಾಡದಲ್ಲಿ ಬಾಗಿನ ಅರ್ಪಿಸಿದ್ದು ವಿಶೇಷವಾಗಿತ್ತು.
ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರು ಕಾವೇರಿಗೆ ಬಾಗಿನ ಅರ್ಪಿಸಿದ ಬಳಿಕ ಅತ್ತ ತೆರಳುತ್ತಲೇ ಕಾವೇರಿ ನಿರಾವರಿ ನಿಗಮದ ಅಧಿಕಾರಿಗಳಿಗೆ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು.
Advertisement
ಈವರೆಗೆ ಯಾವತ್ತೂ ಬಾಡೂಟದ ವ್ಯವಸ್ಥೆ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಎನ್ನುವಂತೆ ನಿಗಮದ ಅಧಿಕಾರಿಗಳು ಬಾಡೂಟವನ್ನು ಅಧಿಕಾರಿಗಳು, ಸಿಬ್ಬಂದಿಗಳಿಗೆ ಹಾಕಿ, ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟಿದ್ದಾರೆ
ಕೆ ಆರ್ ಎಸ್ ನ ಖಾಸಗೀ ಹೋಟೆಲ್ ನಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸಿಎಂ, ಡಿಸಿಎಂ, ಸಚಿವರು ಬಾಗಿನ ಅರ್ಪಿಸಿ ತೆರಳಿದ ಬಳಿಕ ಬಾಡೂಟವನ್ನು ಉಣಬಡಿಸಲಾಗಿದೆ.