For the best experience, open
https://m.bcsuddi.com
on your mobile browser.
Advertisement

ಆರ್‌ಸಿಬಿ ಕಪ್ ಗೆಲ್ಲೋವರೆಗೂ ದರ್ಶನ್ ಜೈಲಿನಲ್ಲಿರಲಿ - ನೆಟ್ಟಿಗರಿಂದ ಟ್ರೋಲ್

12:24 PM Jul 01, 2024 IST | Bcsuddi
ಆರ್‌ಸಿಬಿ ಕಪ್ ಗೆಲ್ಲೋವರೆಗೂ ದರ್ಶನ್ ಜೈಲಿನಲ್ಲಿರಲಿ   ನೆಟ್ಟಿಗರಿಂದ ಟ್ರೋಲ್
Advertisement

ಟಿ20 ವಿಶ್ವಕಪ್‌ 2024ರ ಫೈನಲ್‌ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಭಾರತರ ತಂಡ ಗೆದ್ದು ಬೀಗಿದೆ. ಇನ್ನು, ಈ ಪಂದ್ಯವನ್ನು ಗೆಲ್ಲುವುದಕ್ಕೆ ನಟ ದರ್ಶನ್‌ ಕಾರಣ ಎನ್ನುವ ಟ್ರೋಲ್‌ ವಿಡಿಯೋಗಳು ವೈರಲ್‌ ಆಗಿದ್ದವು. ಇದರ ಬೆನ್ನಲ್ಲೇ ಮತ್ತೊಂದೆಡೆ ಇದೀಗ ಆರ್‌ಸಿಬಿ ಕಪ್ ಗೆಲ್ಲೋವರೆಗೂ ನಟ ದರ್ಶನ್‌ ಜೈಲಿನಲ್ಲೇ ಇರಲಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಭಾರತ ಕಳೆದ ಬಾರಿ 2011ರಲ್ಲಿ ವಿಶ್ವಕಪ್‌ ಗೆದ್ದಿತ್ತು. ಆಗಲೂ ನಟ ದರ್ಶನ್ ಜೈಲು ಸೇರಿದ್ದರು. ಇದೀಗ ಮತ್ತೆ 2024ರಲ್ಲಿ ವಿಶ್ವಕಪ್ ಗೆದ್ದಿದ್ದು, ಈ ಬಾರಿಯೂ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಆದ್ದರಿಂದ ವಿಶ್ವಕಪ್‌ ಗೆಲ್ಲಲು ನಟ ದರ್ಶನ್‌ ಕಾರಣ ಎಂದು ಟ್ರೋಲ್‌ ಆಗಿತ್ತು. 2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ನಟ ದರ್ಶನ್‌ ಜೈಲು ಸೇರಿದ್ದರು. ಇದೀಗ 2024ರಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಈ ಎರಡು ಬಾರಿಯೂ ಟೀಮ್ ಇಂಡಿಯಾ ವಿಶ್ವಕಪ್‌ ಗೆದ್ದಿದೆ. ಆದ್ದರಿಂದ ಆರ್‌ಸಿಬಿ ಕಪ್‌ ಗೆಲ್ಲೋವರೆಗೂ ದರ್ಶನ್ ಜೈಲಿನಲ್ಲಿರಲಿ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

Author Image

Advertisement