ಆರ್ಟಿಸಿಗೆ ಆಧಾರ್ ಜೋಡಣೆಗೆ ಗಡುವು ಕೊಟ್ಟ ಸರ್ಕಾರ
02:23 PM Jun 25, 2024 IST | Bcsuddi
Advertisement
ರಾಜ್ಯದಲ್ಲಿ 4 ಕೋಟಿ ಪಗಣಿಗಳಲ್ಲಿ ಈಗಾಗಲೇ 1.70 ಕೋಟಿ ಪಹಣಿಗೆ ಆಧಾರ್ ಜೋಡಣೆಯಾಗಿದ್ದು, ಉಳಿದದ್ದನ್ನು ಅಭಿಯಾನದ ಮೂಲಕ ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ
ಗಡುವು ನೀಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿ, ಆಧಾರ್ ಜೋಡಣೆಯಿಂದ ಅಕ್ರಮ ತಪ್ಪಲಿದ್ದು ಪರಿಹಾರ, ವರ್ಗಾವಣೆ, ಮ್ಯುಟೇಷನ್ ಪ್ರಕ್ರಿಯೆ ಸರಳವಾಗಲಿದೆ. ಜನರಿಗೆ ಸರಕಾರಿ ಸೇವೆ ಬೇಗ ಲಭ್ಯವಾಗಲಿದೆ. ಉತ್ತಮವಾಗಿ ಕಾರ್ಯ
ನಿರ್ವಹಿಸಿದ ಗ್ರಾಮ ಲೆಕ್ಕಾಧಿಕಾರಿಗಳನ್ನು ಉತ್ತೇಜಿಸಲು ಅವರಿಗೆ ಲ್ಯಾಪ್ಟಾಪ್ಗಳನ್ನು ವಿತರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Advertisement