For the best experience, open
https://m.bcsuddi.com
on your mobile browser.
Advertisement

ಆರೋಪಿಗಳನ್ನು ಬಂಧಿಸುವವರೆಗೆ ನಮ್ಮ ಮನೆಗೆ ಬರಬೇಡಿ - ಗೃಹ ಸಚಿವರಿಗೆ ಮೃತ ಪಿಎಸ್ಐ ಕುಟುಂಬಸ್ಥರ ಮನವಿ

05:00 PM Aug 08, 2024 IST | BC Suddi
ಆರೋಪಿಗಳನ್ನು ಬಂಧಿಸುವವರೆಗೆ ನಮ್ಮ ಮನೆಗೆ ಬರಬೇಡಿ   ಗೃಹ ಸಚಿವರಿಗೆ ಮೃತ ಪಿಎಸ್ಐ ಕುಟುಂಬಸ್ಥರ ಮನವಿ
Advertisement

ಕೊಪ್ಪಳ: ಯಾದಗಿರಿ ಠಾಣೆಯಿಂದ ವರ್ಗಾವಣೆಗೊಂಡ ಬೆನ್ನಲ್ಲೇ ಪಿಎಸ್‌ಐ ಪರಶುರಾಮ್ ಮೃತಪಟ್ಟಿದ್ದರು. ಈ ಅನುಮಾಸ್ಪದ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಲು ರಾಜ್ಯ ಸರಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ಈ ನಡುವೆ ಪರಶುರಾಮ್ ಅವರ ಕುಟುಂಬಸ್ಥರು ತಿಥಿ ಕಾರ್ಯ ಮಾಡಿ ಮುಗಿಸಿದ್ದಾರೆ. ಈ ಪ್ರಕರಣದ ಆರೋಪಿಗಳನ್ನು ಬಂಧಿಸುವವರೆಗ ಗೃಹ ಸಚವರು ನಮ್ಮ ಮನೆಗೆ ಬರುವುದು ಬೇಡ ಎಂದು ಮೃತ ಪಿಎಸ್‌ಐ ಪರಶುರಾಮ್ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಇನ್ನು ಪರಶುರಾಮ್ ಸಾವಿನ ಬಗ್ಗೆ ಸಿಐಡಿ ತನಿಖೆ ಆರಂಭಿಸಿದೆ. ಇದರ ನಡುವೆ ಪರಶುರಾಮ್ ಅವರ ದೇಹದ ವಿವಿಧ ಅಂಗಗಳನ್ನು ಎಫ್​ಎಸ್​ಎಲ್​ಗೆ ಕಳುಹಿಸಲಾಗಿದ್ದು, ಅದರ ವರದಿಗಾಗಿ ಸಿಐಡಿಯವರು ಕಾಯುತ್ತಿದ್ದಾರೆ.

Author Image

Advertisement