For the best experience, open
https://m.bcsuddi.com
on your mobile browser.
Advertisement

ಅರ್ಜುನನ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ

11:57 AM Dec 06, 2023 IST | Bcsuddi
ಅರ್ಜುನನ ಸ್ಮಾರಕ ನಿರ್ಮಾಣ  ಸಿಎಂ ಸಿದ್ದರಾಮಯ್ಯ
Advertisement

ಬೆಂಗಳೂರು: ನಾಡದೇವಿಯ ಹೊರುತ್ತಿದ್ದ ಕ್ಯಾಪ್ಟನ್ ಅರ್ಜುನ ಪ್ರಾಣಕಳೆದುಕೊಂಡ ಜಾಗದಲ್ಲಿ ಹಾಗೂ ಮೈಸೂರಿನ ಹೆಚ್.ಡಿ ಕೋಟೆಯಲ್ಲಿ ಸ್ಮಾರಕ ನಿರ್ಮಾಣ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕ್ಯಾಪ್ಟನ್ ಅರ್ಜುನನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅರ್ಜುನನ ಸಾವಿನ ಕುರಿತಾದ ಸಂಪೂರ್ಣ ಮಾಹಿತಿ ಕೇಳಿದ್ದೇನೆ. ಎಂಟು ಬಾರಿ ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಅಚಾನಕ್ ಆಗಿ ಸಾವನ್ನಪ್ಪಿದ್ದಾನೆ. ಆತ ಇನ್ನೂ ಹೆಚ್ಚು ಸಮಯ ಬದುಕಬೇಕಿತ್ತು. ಮತ್ತೊಂದು ಆನೆಯ ಕಾರ್ಯಾಚರಣೆಗೆಂದು ಅರ್ಜುನನನ್ನು ಉಪಯೋಗಿಸಿದ್ದರಿಂದ ಅರ್ಜುನ ಸಾವನ್ನಪ್ಪಿದ್ದಾನೆ ಎಂದರು.

ಇನ್ನು ಹಾಸನದಲ್ಲಿ ಈ ಬಗ್ಗೆ ಮಾತನಾಡಿದ ಕಾಪ್ಟನ್ ಅರ್ಜುನನ ಮಾವುತ ವಿನು, ಅರ್ಜುನ ಹತ್ತು ಜನರ ಪ್ರಾಣವನ್ನು ಉಳಿಸಿ ಸಾವನ್ನಪ್ಪಿದ್ದಾನೆ. ಆದ್ದರಿಂದ ಮೈಸೂರಿನಲ್ಲೇ ಅರ್ಜುನನ ಸ್ಮಾರಕ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

Author Image

Advertisement