ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಅಯೋಧ್ಯೆಯಲ್ಲಿ ಬಿಜೆಪಿ ಸೋಲಿನ ಕರಾಳ ಸತ್ಯ ಬಿಚ್ಚಿಟ್ಟ ರಾಮನಗರಿಯ ಜನತೆ

01:01 PM Jun 08, 2024 IST | Bcsuddi
Advertisement

ಅಯೋಧ್ಯೆ : 2024ರ ಲೋಕಸಭೆ ಚುನಾವಣೆ ಫಲಿತಾಂಶ ಕೆಲವು ಕಡೆಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇನ್ನೂ ಅಯೋಧ್ಯೆಯಲ್ಲಿ ಬಿಜೆಪಿಗೆ ಸೋಲಾಗಿರುವುದು ಶಾಕಿಂಗ್‌ ಸಂಗತಿ ಈ ಸೋಲಿಗೆ ಕರಾಣ ಏನು ಎನ್ನುವುದನ್ನು ಜನರೇ ಹೇಳಿದ್ದಾರೆ. ಹೌದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಯೋಧ್ಯೆಯಲ್ಲಿ ಗಂಗಾ ಹರಿವು, ರಾಮ ಮಂದಿರ, ವಿಮಾನ ನಿಲ್ದಾಣ, ಅಯೋಧ್ಯಾಧಾಮದ ಅಂತಾರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣ, ರಾಮಪಥ ನಿರ್ಮಾಣ ಮತ್ತು ರಾಮ್ ಕಿ ಪೈದಿಯ ಸೌಂದರ್ಯವನ್ನು ಹೆಚ್ಚಿಸುವ ಮೂಲಕ ಅಭಿವೃದ್ಧಿ ಮಾಡಿದ ಬಿಜೆಪಿ ಫೈಜಾಬಾದ್ ಲೋಕಸಭೆಯಿಂದ ಸೋತಿದೆ.

Advertisement

ಕಾರಣ ಬಿಜೆಪಿಯ ಆಡಳಿತ ವೈಖರಿ. 2019 ರ ಚುನಾವಣೆಯಲ್ಲಿ ಲಲ್ಲು ಸಿಂಗ್ ಗೆದ್ದಾಗ, ನೀವು ಮೋದಿಗೆ ಮತ ಹಾಕಿದ್ದೀರಿ, ನನಗಲ್ಲ ಎಂದು ಜನರಿಗೆ ಹೇಳಿದ್ದರು. ಸಾವಿರಾರು ಅಂಗಡಿ, ಮನೆಗಳನ್ನು ನೆಲಸಮಗೊಳಿಸಿ ರಾಮಪಥ ನಿರ್ಮಿಸಿದ್ದರೂ ಸೂಕ್ತ ಪರಿಹಾರ ನೀಡಿಲ್ಲ. ನಜುಲ್ ಅವರ ಜಮೀನಿನಲ್ಲಿ ನಿರ್ಮಿಸಿರುವ ಅಂಗಡಿ ಹಾಗೂ ಮನೆಗೆ ಪರಿಹಾರ ನೀಡಿಲ್ಲ. ಸ್ಥಳೀಯ ಜನರು ತಮ್ಮ ಸಾರ್ವಜನಿಕ ಪ್ರತಿನಿಧಿ ಲಲ್ಲು ಸಿಂಗ್ ಅವರ ಬಳಿಗೆ ಹೋದಾಗ, ಇದು ಸರ್ಕಾರದ ವಿಷಯ ಎಂದು ಹೇಳುತ್ತಿದ್ದರು. ಇದು ಸೋಲಿಗೆ ಕಾರಣ. ಹಾಗೆ ಈ ಚುನಾವಣೆಯಲ್ಲಿ ಜಾತೀಯತೆ ಮೇಲುಗೈ ಸಾಧಿಸಿದೆ. ದೇವಸ್ಥಾನದ ಸಮಸ್ಯೆಯಾಗಲೀ, ಅಭಿವೃದ್ಧಿಯ ವಿಷಯವಾಗಲೀ, ಬೆಲೆಯೇರಿಕೆಯ ಸಮಸ್ಯೆಯಾಗಲೀ ಬರಲಿಲ್ಲ, ಈ ಚುನಾವಣೆಯಲ್ಲಿ ಕೇವಲ ಧರ್ಮ ಮತ್ತು ಜಾತೀಯತೆಯೇ ಮೇಲುಗೈ ಸಾಧಿಸಿದೆ ಎಂದು ಅಲ್ಲಿನ ಪಬ್ಲಿಕ್‌ ಹೇಳಿದ್ದಾರೆ.

ಮತ್ತೊಂದೆಡೆ, ಲಲ್ಲು ಸಿಂಗ್ ಸಾರ್ವಜನಿಕರ ಧ್ವನಿಯನ್ನು ಎಂದಿಗೂ ಕೇಳಲಿಲ್ಲ ಜನರನ್ನು ನಿರ್ಲಕ್ಷಿಸಿದ್ದು ಸೋಲಿಗೆ ಕಾರಣ. ರಾಮಪಥ ನಿರ್ಮಾಣದ ವೇಳೆ ಅಂಗಡಿ, ಮನೆಗಳನ್ನು ಕೆಡವಿದಾಗ ಪರಿಹಾರಕ್ಕಾಗಿ ಜನ ಪ್ರತಿನಿಧಿಗಳ ಬಳಿ ಹೋದಾಗ ಇದು ಸರ್ಕಾರದ ವಿಚಾರ ಎಂದು ತಿರಸ್ಕರಿಸಿದ್ದಾರೆ, ಹಾಗಾದರೆ ಸರ್ಕಾರದ ಮೊರೆ ಹೋಗುವವರು ಯಾರು? ಸಾರ್ವಜನಿಕರಾ ಅಥವಾ ಜನಪ್ರತಿನಿಧಿಗಲಾ ಎಂದು ಕೋಪಿತಗೊಂಡ ಜನ ಈ ಬಾರಿ ಸೋಲಿನ ರುಚಿ ತೋರಿಸಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ. ಬಡವರ ಬಳಿ ಇರುವ ದೊಡ್ಡ ಅಸ್ತ್ರವೆಂದರೆ ಅವರ ಮತ ಅದನ್ನು ಸರಿಯಾದ ಸಮಯಕ್ಕೆ ಉಪಯೋಗಿಸಿ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ.

Advertisement
Next Article