ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಅಮವಾಸೆ ದಿನವೇ ಜೈಲು ಸೇರಿರೋ ರೇವಣ್ಣಗೆ ಜಾಮೀನಿನ ಚಿಂತೆ

12:06 PM May 09, 2024 IST | Bcsuddi
Advertisement

ಬೆಂಗಳೂರು : ಸಂತ್ರಸ್ಥೆಯನ್ನ ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ಜೈಲು ಸೇರಿರೋ ಹೆಚ್ ಡಿ ರೇವಣ್ಣ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಸದಾ ಪೂಜೆ, ಕಾಲ‌, ಗಳಿಗೆ, ದಿನ, ತಿಥಿ, ವಾರ ನೋಡ್ತಿದ್ದ ರೇವಣ್ಣಗೆ ಅಮವಾಸೆ ದಿನವೇ ಜೈಲೂ ಸೇರಿದ್ದು ಸಾಕಷ್ಟು ಚಿಂತೆಗೆ ಎಡೆ ಮಾಡಿಕೊಟ್ಟಿದೆ.

Advertisement

ಇಂದು ಮುಂಜಾನೆ ಎದ್ದು ಸೂರ್ಯ ನಮಸ್ಕಾರ ಮಾಡಿರೋ ರೇವಣ್ಣ ವಿಐಪಿ ಬ್ಯಾರಕ್ ನಲ್ಲಿ ದೇವರಿಗೆ ನಮಸ್ಕಾರ ಮಾಡಿ ದಿನ ಆರಂಭಿಸಿದ್ದಾರೆ. ಹೊಟ್ಟೆನೋವಿನ ಹಿನ್ನೆಲೆ ರಾತ್ರಿ 11.15 ಕ್ಕೆ ರೇವಣ್ಣಗೆ ಜೈಲಿನ ಆಸ್ಪತ್ರೆ ವಾರ್ಡ್ ವೈದ್ಯರು ಚಿಕಿತ್ಸೆ ನೀಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊಟ್ಟಿರೋ ಮಾತ್ರೆಗಳನ್ನ ಮುಂದುವರೆಸಲು ಸಲಹೆ ನೀಡಿದ್ದಾರೆ.

ಮಾತ್ರೆಗಳನ್ನ ತೆಗೆದುಕೊಳ್ಳುವ ಹಿನ್ನಲೆ ಬೆಳಗ್ಗೆ ಜೈಲಿನ ಮೆನು ಪ್ರಕಾರ ಪುಳಿಯೋಗರೆ ಸ್ವಲ್ಪ ತಿಂದಿರೋ ರೇವಣ್ಣ. ಇವತ್ತಿನ ಜಾಮೀನು ಅರ್ಜಿ ವಿಚಾರಣೆಯಲ್ಲಿ ಏನಾಗುತ್ತೋ ಎಂಬುದರ ಬಗ್ಗೆಯೇ ಫುಲ್ ಟೆನ್ಶನ್ ಆಗಿದ್ದಾರೆ. ಬಂಧನವಾಗಿ ಜೈಲು ಸೇರಿದ್ದರಿಂದ ಮಾನಸಿಕವಾಗಿ ಕುಗ್ಗಿರೋ ರೇವಣ್ಣ ಏನಾಯ್ತೋ ಗೊತ್ತಿಲ್ಲ, ನನ್ನ ಪರಿಸ್ಥಿತಿ ಹೀಗಾಗೋತ್ತು ಅಂತ ಸಿಬ್ಬಂದಿಗಳ ಬಳಿ ಹೇಳಿಕೊಂಡಿದ್ದಾರಂತೆ. ಕ್ವಾರಂಟೈನ್ ಸೆಲ್ ನ ಕೆಳಮಹಡಿಯ ಬ್ಯಾರಕ್ ನಲ್ಲಿ ರೇವಣ್ಣರನ್ನ ಇರಿಸಲಾಗಿದೆ.

Advertisement
Next Article