ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಅಭಿಮಾನಿಯ ಮೊಬೈಲ್‌ನ್ನು ಎಸೆದು ಜನರ ಕೆಂಗಣ್ಣಿಗೆ ಗುರಿಯಾದ ಖ್ಯಾತ ಗಾಯಕ

01:48 PM Feb 12, 2024 IST | Bcsuddi
Advertisement

ಚತ್ತೀಸಗಢ: ಖ್ಯಾತ ಗಾಯಕನಾದ ಆದಿತ್ಯ ನಾರಾಯಣ್ ಖಾಸಗಿ ಕಾರ್ಯಕ್ರಮದಲ್ಲಿ ಅಭಿಮಾನಿಯೋರ್ವನ ಮೊಬೈಲನ್ನು ಎಸೆದಿದ್ದು ವಿವಿಧ ವ್ಯಕ್ತಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

Advertisement

ಅದ್ಭುತ ಗಾಯಕನಾದ ಆದಿತ್ಯ ನಾರಾಯಣ್ ಚತ್ತೀಸಗಢದ ಕಾಲೇಜೊಂದರಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಇವರ ಹಾಡನ್ನು ಕೇಳಲು ಜನ ಸಾಗರವೇ ತುಂಬಿತ್ತು ಈ ವೇಳೆ ಅವರ ಓರ್ವ ಅಭಿಮಾನಿ ಇವರ ಗಾಯನವನ್ನು ಮೊಬೈಲಿನಲ್ಲಿ ವೀಡಿಯೋ ಮಾಡುತ್ತಿದ್ದ ಎಂಬ ಕಾರಣಕ್ಕೆ ಮೊಬೈಲನ್ನೇ ಎಸೆದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಜನರು ವಿವಿಧ ರೀತಿಯ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ.

ಆದಿತ್ಯರವರು ಶಾರುಖ್ ಖಾನ್ ನಟನೆಯ ‘ಡಾನ್’ಚಿತ್ರದ ‘ಆಜ್ ಕಿ ರಾತ್..’ ಹಾಡನ್ನು ಹಾಡುತ್ತಿದ್ದರು. ಏಕಾಏಕಿ ಸಿಟ್ಟಾದ ಅವರು ಅಭಿಮಾನಿಯ ಮೊಬೈಲನ್ನು ಕಸಿದು ಜನರತ್ತ ಎಸೆದಿದ್ದು ಅವರು ಈ ರೀತಿ ಮಾಡಬಾರದಿತ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಹೇಳಿದ್ದಾರೆ.

‘ಆದಿತ್ಯ ಅವರೇ ಈ ರೀತಿ ಅಗೌರಯುತವಾಗಿ ನಡೆದುಕೊಳ್ಳೋದು ಎಷ್ಟು ಸರಿ? ಅವರು ನಿಮ್ಮ ಅಭಿಮಾನಿ. ಅವರಿಗೆ ಗೌರವ ನೀಡಿ’ಎಂದು ಹೇಳಿದರೆ ಇನ್ನೂ ಕೆಲವರು. ‘ಅಭಿಮಾನಿಗಳು ಬರದೇ ಇದ್ದರೆ ನೀವು ವೇದಿಕೆ ಕಾರ್ಯಕ್ರಮ ಹೇಗೆ ನೀಡುತ್ತೀರಿ? ನಿಮ್ಮಿಂದಲೇ ನಾವು’ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

Advertisement
Next Article