For the best experience, open
https://m.bcsuddi.com
on your mobile browser.
Advertisement

ಅನ್ಯಾಯಕ್ಕೆ ಹೆಸರಾದವರು ನ್ಯಾಯ ಕೊಡಿಸುವಂತೆ ನಟಿಸುತ್ತಿದ್ದಾರೆ: ಸ್ಮೃತಿ ಇರಾನಿ ಲೇವಡಿ

11:18 AM Dec 29, 2023 IST | Bcsuddi
ಅನ್ಯಾಯಕ್ಕೆ ಹೆಸರಾದವರು ನ್ಯಾಯ ಕೊಡಿಸುವಂತೆ ನಟಿಸುತ್ತಿದ್ದಾರೆ  ಸ್ಮೃತಿ ಇರಾನಿ ಲೇವಡಿ
Advertisement

ಅಮೇಥಿ: ಅನ್ಯಾಯಕ್ಕೆ ಹೆಸರಾದವರು ನ್ಯಾಯ ಕೊಡಿಸುವಂತೆ ನಟಿಸುತ್ತಿದ್ದಾರೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಭಾರತ ನ್ಯಾಯ ಯಾತ್ರೆ’ಯನ್ನು ನೆಪಮಾತ್ರ ಎಂದು ಲೇವಡಿ ಮಾಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಲ್ಲಿ ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದ ಸ್ಮೃತಿ ಇರಾನಿ ತಮ್ಮ ಸಂಸದೀಯ ಕ್ಷೇತ್ರ ಅಮೇಥಿಗೆ ಎರಡು ದಿನಗಳ ಭೇಟಿಯಲ್ಲಿದ್ದಾಗ ರಾಹುಲ್ ಗಾಂಧಿ ಅವರ ಪ್ರವಾಸದ ಕುರಿತಂತೆ ಪ್ರತಿಕ್ರಿಯಿಸಿದರು. 'ಅನ್ಯಾಯಕ್ಕೆ ಹೆಸರಾದವರು ನ್ಯಾಯಕ್ಕಾಗಿ 'ಧೋಂಗ್' (ಶಮ್) ಮಾಡುತ್ತಿದ್ದಾರೆ. ಇದು ನೆಪಮಾತ್ರ ಎಂದು ಟೀಕಿಸಿದ್ದಾರೆ.

ಲೋಕಸಭೆ ಚುನಾವಣೆಗೂ ಮುನ್ನ ಜನವರಿ 14ರಂದು ಮಣಿಪುರದಿಂದ ಮುಂಬೈಗೆ ರಾಹುಲ್ ಗಾಂಧಿಯವರ ‘ಭಾರತ ನ್ಯಾಯ ಯಾತ್ರೆ’ ಆರಂಭವಾಗಲಿದೆ. ಪೂರ್ವದಿಂದ ಪಶ್ಚಿಮಕ್ಕೆ 67 ದಿನಗಳ ಪ್ರಯಾಣವು 14 ರಾಜ್ಯಗಳ 85 ಜಿಲ್ಲೆಗಳ ಮೂಲಕ 6,200 ಕಿ.ಮೀ. ಗಾಂಧಿಯವರು ಈ ಹಿಂದೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ‘ಭಾರತ್ ಜೋಡೋ ಯಾತ್ರೆ’ ನಡೆಸಿದ್ದರು.

Advertisement

Author Image

Advertisement