For the best experience, open
https://m.bcsuddi.com
on your mobile browser.
Advertisement

ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಸದನ

01:27 PM Jul 15, 2024 IST | Bcsuddi
ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಸದನ
Advertisement

ಬೆಂಗಳೂರು: ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭವಾಗಿದ್ದು, ಕಲಾಪದ ಮೊದಲ ಹಂತದಲ್ಲೇ ಅಗಲಿದ 14 ಮಂದಿ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.

ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ, ಮಾಜಿ ಸಚಿವ ಶೀನಿವಾಸ್ ಪ್ರಸಾದ್, ಮಾಜಿ ಶಾಸಕ ಕೇಶವ ಮೂರ್ತಿ, ಬೆಳ್ತಂಗಡಿಯ ಮಾಜಿ ಶಾಸಕ ವಸಂತ್ ಬಂಗೇರ, ಸೇರಿದಂತೆ ಅನೇಕ ರಾಜಕೀಯ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಚಿತ್ರರಂಗದವರಾದ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಹಾಗೂ ನಿರೂಪಕಿ ಅಪರ್ಣಾ ಅವರಿಗೆ ಸಂತಾಪ ಸೂಚಿಸಲಾಯಿತು. ಜೊತೆಗೆ ಸಾಹಿತಿ ಕಮಲ ಹಂಪನಾ ಹಾಗೂ ಉಳ್ಳಾಲ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅವರಿಗೆ ಸಂತಾಪ ಸೂಚಿಸಲಾಯಿತು.

ಕರ್ನಾಟಕ ವಿಧಾನಮಂಡಲ 16ನೇ ಅಧಿವೇಶನ ಇಂದು ಆರಂಭವಾಗಿದೆ. ಮುಡಾ, ವಾಲ್ಮೀಕಿ ಅಕ್ರಮಗಳ ಆರೋಪಗಳ ಮಧ್ಯೆ ಈ ಬಾರಿಯ ಕಲಾಪ ಪ್ರಾರಂಭವಾಗಿದೆ. ಹಗರಣಗಳ ಅಸ್ತ್ರಗಳನ್ನೇ ಮುಂದಿಟ್ಟುಕೊಂಡು ವಿಪಕ್ಷಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕದನಕ್ಕೆ ಸಿದ್ಧವಾಗಿದೆ.

Advertisement

Author Image

Advertisement