For the best experience, open
https://m.bcsuddi.com
on your mobile browser.
Advertisement

ಅಂಜಲಿ ಹತ್ಯೆ ಪ್ರಕರಣ: ಆರೋಪಿ ಗಿರೀಶ ಸಿಐಡಿ ಕಸ್ಟಡಿಗೆ

03:05 PM May 22, 2024 IST | Bcsuddi
ಅಂಜಲಿ ಹತ್ಯೆ ಪ್ರಕರಣ  ಆರೋಪಿ ಗಿರೀಶ ಸಿಐಡಿ ಕಸ್ಟಡಿಗೆ
Advertisement

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆ ಸಂಬಂಧ ಆರೋಪಿ ಗಿರೀಶ ಸಾವಂತನನ್ನು ಸಿಐಡಿ ಅಧಿಕಾರಿಗಳು ಬುಧವಾರ ತಮ್ಮ ಕಸ್ಟಡಿಗೆ ಪಡೆದರು.

ಗಾಯಗೊಂಡಿದ್ದ ಗಿರೀಶನಿಗೆ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀ ಡಲಾಗುತ್ತಿತ್ತು. ಆಸ್ಪತ್ರೆಗೆ ಆಗಮಿಸಿದ ಸಿಐಡಿ ಅಧಿಕಾರಿಗಳ ತಂಡ ಆತನನ್ನು ವಶಕ್ಕೆ ಪಡೆದರು.
ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಸಿಐಡಿ ಎಸ್.ಪಿ. ವೆಂಕಟೇ ಶ್ ನೇತೃತ್ವದ ಡಿವೈಎಸ್ಪಿ ದರ್ಜೆ ಅಧಿಕಾರಿ ಸೇರಿ ಎಂಟು ಮಂದಿ ಅಧಿಕಾರಿಗಳ ತಂಡ ಮಂಗಳವಾರ ಹುಬ್ಬಳ್ಳಿಗೆ ಆಗಮಿಸಿತ್ತು. ಬೆಂಡಿಗೇ ರಿ
ಪೊಲೀಸ್ ಠಾಣೆಯಿಂದ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದರು.

Advertisement

Author Image

Advertisement